ರಾಯಚೂರು: ತಾಲ್ಲೂಕಿನ ಗಿಲ್ಲೇಸೂಗುರು ಗ್ರಾಮ ಪಂಚಾಯಿತಿಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಪವಾರ್ ಭೇಟಿ ನೀಡಿ ನರೇಗಾದ ವಿವಿಧ ಕಾಮಗಾರಿಗಳ ಪರಿಶೀಲನೆ ಮಾಡಿದರು.
ನಂತರ ಕೂಲಿಕಾರ್ಮಿಕರ ಜೊತೆ ಮಾತನಾಡಿ,‘ಗುಡ್ಡದ ಕೆಳ ಭಾಗದಲ್ಲಿ ದೊಡ್ಡದಾದ ಕಂದಕ ಬದು ನಿರ್ಮಾಣ ಮಾಡಿದರೆ ಸುಮಾರು 2 ಲಕ್ಷ ಲೀಟರ್ ನೀರನ್ನು ಸಂಗ್ರಹ ಮಾಡಲು ಸಾಧ್ಯವಾಗಲಿದೆ. ಇದರಿಂದ ಜಾನುವಾರಗಳಿಗೆ ಮೇವು ಬೆಳೆಯಲು ಮತ್ತು ನೀರು ಕುಡಿಯಲು ಅನುಕೂಲವಾಗುತ್ತದೆ’ ಎಂದರು.
ನರೇಗಾ ಸಹಾಯಕ ನಿರ್ದೇಶಕ ಹನುಮಂತ, ಪಿಡಿಒ ರವಿಕುಮಾರ್, ಬಿ.ಸಿ ಭೀಮರೆಡ್ಡಿ, ಬಿ.ಎಫ್.ಟಿ ಇಮಾನುವೆಲ್, ಜಿ.ಕೆ.ಎಂ ಭೀಮವ್ವ ಹಾಗೂ ಮೇಟ್ ಕೂಲಿಕಾರರು ಮತ್ತು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.