ADVERTISEMENT

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 13:55 IST
Last Updated 13 ಜೂನ್ 2024, 13:55 IST
ಲಿಂಗಸುಗೂರು ತಾಲ್ಲೂಕಿನಲ್ಲಿ ಎರಡು ದಿನ ಸುರಿದ ಧಾರಾಕಾರ ಮಳೆಗೆ ಗುರವಾರ ಸರ್ಜಾಪುರದ ಮಳೆ ಆಶ್ರಿತ ಕೆರೆ ಭರ್ತಿಯಾಗಿರುವ ಚಿತ್ರಣ
ಲಿಂಗಸುಗೂರು ತಾಲ್ಲೂಕಿನಲ್ಲಿ ಎರಡು ದಿನ ಸುರಿದ ಧಾರಾಕಾರ ಮಳೆಗೆ ಗುರವಾರ ಸರ್ಜಾಪುರದ ಮಳೆ ಆಶ್ರಿತ ಕೆರೆ ಭರ್ತಿಯಾಗಿರುವ ಚಿತ್ರಣ   

ಲಿಂಗಸುಗೂರು: ತಾಲ್ಲೂಕಿನಾದ್ಯಂತ ಮೃಗಶಿರ ಮಳೆ ಧಾರಾಕಾರವಾಗಿ ಸುರಿದಿದೆ. ಹಳ್ಳ, ನಾಲಾ, ಕೃಷಿಹೊಂಡ, ಕೆರೆಗಳು ತುಂಬಿದ್ದು ಜಮೀನುಗಳು ಸಂಪೂರ್ಣ ಹಸಿಯಾಗಿದ್ದು ರೈತರ ಮೊಗದಲ್ಲಿ ಹರ್ಷ ಮೂಡಿಸಿದೆ.

ಬುಧವಾರ ಮತ್ತು ಗುರುವಾರ ಸುರಿದ ಧಾರಾಕಾರ ಮಳೆಗೆ ಜಮೀನುಗಳ ಒಡ್ಡು ವಾರೆ ಕಿತ್ತು ಹೋಗಿವೆ. ಇತರೆ ಯಾವುದೇ ಹಾನಿಯಾದ ಬಗ್ಗೆ ಮಾಹಿತಿ ಬಂದಿಲ್ಲ. ರೈತರು ಬಿತ್ತನೆ ಬೀಜ, ಗೊಬ್ಬರ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

ಸರ್ಜಾಪುರ ಗ್ರಾಮದ ಮಳೆ ಆಶ್ರಿತ ಕುಡಿಯುವ ನೀರಿನ ಕೆರೆ ಬರಿದಾಗಿತ್ತು. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಂದರ್ಭದಲ್ಲಿ ಧಾರಾಕಾರ ಮಳೆಗೆ ಭರ್ತಿ ಆಗಿರುವುದು ಗ್ರಾಮಸ್ಥರಲ್ಲಿ ಖುಷಿ ತಂದಿದೆ.

ADVERTISEMENT

ತಹಶೀಲ್ದಾರ್‌ ಶಾಲಂಸಾಬ ಮಾತನಾಡಿ, ‘ತಾಲ್ಲೂಕಿನಾದ್ಯಂತ ಮೃಗಶಿರ ಮಳೆ ಉತ್ತಮವಾಗಿದೆ. ಲಿಂಗಸುಗೂರು- 54.4 ಮಿ.ಮೀ, ಮುದಗಲ್ಲ- 21.4 ಮಿ.ಮೀ, ಗುರುಗುಂಟಾ- 68 ಮಿ.ಮೀ, ಹಟ್ಟಿ- 88 ಮಿ.ಮೀ ಮಳೆ ದಾಖಲಾಗಿದೆ. ಮುಂಗಾರು ಬಿತ್ತನೆಗೆ ಅನುಕೂಲವಾಗಿದೆ. ಹಾನಿಯಾದ ಬಗ್ಗೆ ವರದಿಗಳು ಬಂದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.