ADVERTISEMENT

ಪಿಎಸ್ಐ, ಕಾನ್‌ಸ್ಟೆಬಲ್ ವೈದ್ಯಕೀಯ ತಪಾಸಣೆ

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಪೊಲೀಸ್ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 25 ಮೇ 2024, 16:14 IST
Last Updated 25 ಮೇ 2024, 16:14 IST
ರಾಯಚೂರು ಲೋಕಾಯುಕ್ತ ಅಧಿಕಾರಿಗಳು ಗಬ್ಬೂರು ಠಾಣೆ ಪಿಎಸ್‌ಐ ಮಂಜುನಾಥ ಹಾಗೂ ಕಾನ್ ಸ್ಟೆಬಲ್ ರಮೇಶ ಅವರನ್ನು ವೈದ್ಯಕೀಯ ತಪಾಸಣೆಗಾಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು
ರಾಯಚೂರು ಲೋಕಾಯುಕ್ತ ಅಧಿಕಾರಿಗಳು ಗಬ್ಬೂರು ಠಾಣೆ ಪಿಎಸ್‌ಐ ಮಂಜುನಾಥ ಹಾಗೂ ಕಾನ್ ಸ್ಟೆಬಲ್ ರಮೇಶ ಅವರನ್ನು ವೈದ್ಯಕೀಯ ತಪಾಸಣೆಗಾಗಿ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು   

ರಾಯಚೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ವಿಚಾರವಾಗಿ ಲಂಚದ ಬೇಡಿಕೆ ಇಟ್ಟು ಲೋಕಾಯುಕ್ತರ ಬಲೆಗೆ ಬಿದ್ದಿರುವ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ, ಕಾನ್‌ಸ್ಟೆಬಲ್ ರಮೇಶ ಅವರನ್ನು ಶನಿವಾರ ರಿಮ್ಸ್‌ ಬೋಧಕ ಆಸ್ಪತ್ರೆಗೆ ಕರೆ ತಂದು ವೈದ್ಯಕೀಯ ತಪಾಸಣೆಯ ನಡೆಸಲಾಯಿತು.

ಗಬ್ಬೂರು ನಿವಾಸಿ ಫಾರೂಕ್‌ ಅವರ ಮೇಲೆ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ದಾಖಲು ಮಾಡದೇ ಇರಲು ₹10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕಾನ್‌ಸ್ಟೆಬಲ್ ರಮೇಶ ಮೂಲಕ ₹3 ಲಕ್ಷಕ್ಕೆ ವ್ಯವಹಾರ ಕುದುರಿಸಿದ್ದರು. ಬೆಟ್ಟಿಂಗ್‌ ದಂದೆಯಲ್ಲಿ ಭಾಗಿಯಾಗದಿದ್ದರೂ ಪ್ರಕರಣ ದಾಖಲು ಮಾಡುತ್ತಾರೆ ಎನ್ನುವ ಆತಂಕ ಹಾಗೂ ಪೊಲೀಸರ ಕಿರಿಕಿರಿಯಿಂದಾಗಿ ಫಾರೂಕ್‌ ಮೊದಲಿಗೆ ₹70 ಸಾವಿರ ನಗದು ಹಾಗೂ ₹30 ಸಾವಿರ ಪೋನ್ ಪೇ ಮುಖಾಂತರ ಹಣ ಕೊಟ್ಟಿದ್ದರು. ನಂತರ ಲೋಕಾಯುಕ್ತರಿಗೆ ದೂರು ನೀಡಿದ್ದರು

ದೂರು ಸ್ವೀಕರಿಸಿದ ಲೋಕಾಯುಕ್ತರ ಅಧಿಕಾರಿಗಳು ಕಾನ್‌ಸ್ಟೆಬಲ್ ರಮೇಶ ₹50 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.