ADVERTISEMENT

‘ಪ್ರಕರಣ ದಾಖಲಿಸಿಕೊಳ್ಳಲು ಪಿಎಸ್ಐ ಹಿಂದೇಟು’ 

​ಪ್ರಜಾವಾಣಿ ವಾರ್ತೆ
Published 16 ಜನವರಿ 2024, 14:14 IST
Last Updated 16 ಜನವರಿ 2024, 14:14 IST
ಇಸ್ಮಾಯಿಲ್ ಪಾಷಾ ಉಸ್ತಾದ್
ಇಸ್ಮಾಯಿಲ್ ಪಾಷಾ ಉಸ್ತಾದ್   

ಹಟ್ಟಿಚಿನ್ನದಗಣಿ: ‘ಕೌಟುಂಬಿಕ ಸಮಸ್ಯೆ ಕುರಿತು ದೂರು ನೀಡಲು ಹೋದರೆ ಮುದಗಲ್ ಠಾಣೆ ಪಿಎಸ್ಐ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ಇಸ್ಮಾಯಿಲ್ ಪಾಷಾ ಉಸ್ತಾದ್ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಅಮೀನಾ ಬೇಗಂ ಎನ್ನುವವರ ಕಡೆಯವರು ಹಟ್ಟಿ ಪಟ್ಟಣದ ಯುವಕ ಅಹಮ್ಮದ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ದೂರು ನೀಡಲು ಹೋದರೆ ಮೂರು ತಿಂಗಳಿನಿಂದ ಸತಾಯಿಸುತ್ತಿದ್ದಾರೆ. ರಾಜಕೀಯ ಪ್ರಭಾವ ಬಳಸಿಕೊಂಡು ಪಿಎಸ್ಐ ಮೇಲೆ ಒತ್ತಡ ಹೇರಿ ದೂರು ನೀಡಲು ಹೋದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ’ ಎಂದರು.

ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ಉದಾಸೀನ ಮಾಡುತ್ತಿದ್ದಾರೆ. ಪಿಎಸ್ಐ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಹಮ್ಮದ್, ಯಾಕೂಬ್ ಮೆಕ್ಯಾನಿಕ್ ಇಸ್ಮಾಯಿಲ್ ಹಾಗೂ ಪಾಷಾ ಉಪಸ್ಧಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.