ಸಿರವಾರ: ಕಾಯಕ ನಿಷ್ಠೆ, ದಾಸೋಹಕ್ಕೆ ಕಾಣಿಕೆ ನೀಡಿ, 12ನೇ ಶತಮಾನದಲ್ಲಿ ಬಸವಣ್ಣನವ ಸಮಕಾಲೀನರಾಗಿ ತಾವು ಮಾಡುವ ಕಾಯಕದ ಮೂಲಕ ಸನ್ಮಾರ್ಗ ಹಾಕಿಕೊಟ್ಟ ಮಹಾನ್ ಶರಣ ಮಡಿವಾಳ ಮಾಚಿದೇವ' ಎಂದು ಮಡಿವಾಳ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಹುಚ್ಚಪ್ಪ ಸೈದಾಪೂರ ಹೇಳಿದರು.
ಮಡಿವಾಳ ಮಾಚಿದೇವರ ಜಯಂತಿ ಅಂಗವಾಗಿ ಪಟ್ಟಣದ ಮಡಿವಾಳ ಮಾಚಿದೇವ ವೃತ್ತದಲ್ಲಿ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು
ಬಸವರಾಜ ನಾಗಡದಿನ್ನಿ, ಹುಲಿಗೆಪ್ಪ ಮಡಿವಾಳ ನಾಗಡದಿನ್ನಿ, ನಾಗಪ್ಪ ಹೆಗ್ಗಡದಿನ್ನಿ, ಪ್ರಕಾಶ ಮಡಿವಾಳ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.