ADVERTISEMENT

ಹಟ್ಟಿಚಿನ್ನದಗಣಿ | ರಸ್ತೆ ಅಪಘಾತ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:21 IST
Last Updated 23 ಫೆಬ್ರುವರಿ 2024, 15:21 IST
ಹಟ್ಟಿ ಚಿನ್ನದಗಣಿ ಸಮೀಪದ ಹಟ್ಟಿ– ಹೊಸೂರು ಕ್ರಾಸ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೊ ನಜ್ಜುಗುಜ್ಜಾಗಿದೆ
ಹಟ್ಟಿ ಚಿನ್ನದಗಣಿ ಸಮೀಪದ ಹಟ್ಟಿ– ಹೊಸೂರು ಕ್ರಾಸ್‌ ಬಳಿ ಸಂಭವಿಸಿದ ಅಪಘಾತದಲ್ಲಿ ಆಟೊ ನಜ್ಜುಗುಜ್ಜಾಗಿದೆ   

ಹಟ್ಟಿಚಿನ್ನದಗಣಿ: ಹಟ್ಟಿ-ಹೊಸೂರು ಕ್ರಾಸ್ ಬಳಿ ಆಟೊ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಧಳದಲ್ಲೆ ಮೃತಪಟ್ಟ ಘಟನೆ ಗುರುವಾರ ಜರುಗಿದೆ.

ಬೈಕ್ ಸವಾರ, ಗೌಡೂರು ಗ್ರಾಮದ ನಿವಾಸಿ ಶಿವರಾಜ(30) ಮೃತರು. ಅಪಘಾತದಲ್ಲಿ ಆಟೊದಲ್ಲಿದ್ದ ಆದಪ್ಪ ಹಾಗೂ ಬೈಕ್‌ ಮೇಲಿದ್ದ ದೇವರಾಜ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಶಿವರಾಜ ಉಮಾದೇಶವಿ ಹಾಗೂ ದೇವರಾಜ ಅವರು ಗೌಡೂರು ಗ್ರಾಮದಿಂದ ಸಿರವಾರ ಮಾರ್ಗದಲ್ಲಿ ಬೈಕ್ ಮೇಲೆ ಹೊರಟಿದ್ದರು. ಈ ವೇಳೆ ಹಟ್ಟಿ–ಹೊಸೂರು ಕ್ರಾಸ್ ಬಳಿ ಬೈಕ್ ಹಾಗೂ ಆಟೊ ಮುಖಾಮುಖಿ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಈ ಕುರಿತು ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.