ADVERTISEMENT

ಸಿಂಧನೂರು | ರಸ್ತೆ ಅಪಘಾತ: ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 11:17 IST
Last Updated 7 ಡಿಸೆಂಬರ್ 2023, 11:17 IST
<div class="paragraphs"><p>ಅಪಘಾತ </p></div>

ಅಪಘಾತ

   

-ಸಾಂದರ್ಭಿಕ ಚಿತ್ರ

ಸಿಂಧನೂರು: ತಾಲ್ಲೂಕಿನ ಪಗಡದಿನ್ನಿ ಕ್ಯಾಂಪ್ ಸಮೀಪ ಗುರುವಾರ ಲಾರಿ ಹಾಗೂ ಟಾಟಾ ಏಸ್‌ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ADVERTISEMENT

ಮೃತಪಟ್ಟವರನ್ನು ಸಿಂಧನೂರಿನ ಇಸ್ಮಾಯಿಲ್‌ ಮೆಹಬೂಬ್‌, ರವಿ ಬೊಕ್ಕನಟ್ಟಿ ಲಿಂಗಸೂರಿನ ಚೆನ್ನಬಸವ, ಅಂಬರೀಷ್ ಎಂದು ಗುರುತಿಸಲಾಗಿದೆ.

ಲಾರಿ ಲಿಂಗಸೂರು ಕಡೆಯಿಂದ ಸಿಂಧನೂರಿಗೆ ಬರುತ್ತಿತ್ತು. ಟಾಟಾ ಏಸ್‌ ಸಿಂಧನೂರಿನಿಂದ ಮಸ್ಕಿ ಕಡೆಗೆ ಹೊರಟಿತ್ತು. ಟಾಟಾಏಸ್‌ನಲ್ಲಿದ್ದ ಮದುವೆ ಮಂಟಪ ಡೆಕೊರೇಷನ್ ಮಾಡುವ ಕಾರ್ಮಿಕರು ಇದ್ದರು.

ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.