ADVERTISEMENT

ಏಮ್ಸ್ ನಿರ್ಲಕ್ಷಿಸಿದರೆ ದೆಹಲಿಯಲ್ಲಿ ಹೋರಾಟ: ಎಚ್ಚರಿಕೆ

ಏಮ್ಸ್‌ ಹೋರಾಟ 700ನೇ ದಿನಕ್ಕೆ ಪದಾರ್ಪಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 15:54 IST
Last Updated 11 ಏಪ್ರಿಲ್ 2024, 15:54 IST
ರಾಯಚೂರಿನ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರವಾರ ಏಮ್ಸ್ ಹೋರಾಟ ಬೆಂಬಲಿಸಿ ಸಾಹಿತಿ ಜಯಲಕ್ಷ್ಮೀ ಮಂಗಳಮೂರ್ತಿ ಮಾತನಾಡಿದರು
ರಾಯಚೂರಿನ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗುರವಾರ ಏಮ್ಸ್ ಹೋರಾಟ ಬೆಂಬಲಿಸಿ ಸಾಹಿತಿ ಜಯಲಕ್ಷ್ಮೀ ಮಂಗಳಮೂರ್ತಿ ಮಾತನಾಡಿದರು    

ರಾಯಚೂರು: ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಕೇಂದ್ರ ಸರ್ಕಾರ ಮುಂದಾಗದಿದ್ದರೆ ದೆಹಲಿಯಲ್ಲಿ ಹೋರಾಟ ಮಾಡಲಾಗುವುದು ಎಂದು ಸಾಹಿತಿ ಜಯಲಕ್ಷ್ಮಿ ಮಂಗಳಮೂರ್ತಿ ಎಚ್ಚರಿಸಿದರು.

ನಗರದ ಜಿಲ್ಲಾ ಮಹಾತ್ಮಗಾಂಧಿ ಕ್ರೀಡಾಂಗಣದ ಬಳಿ ಏಮ್ಸ್ ಹೋರಾಟ ಸಮಿತಿ ನಡೆಸುತ್ತಿರುವ 700ನೇ ದಿನದ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

‘ರಾಯಚೂರು ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆಯಾಗಿದ್ದರೂ ಐಐಟಿಯಿಂದ ವಂಚಿತವಾಗಿದೆ. ಸ್ವಾತಂತ್ರ್ಯ ನಂತರ ಪ್ರಾದೇಶಿಕ ಅಸಮತೋಲನ ಹೆಚ್ಚಾಗುತ್ತಿದೆ. ಉತ್ತರ ಕರ್ನಾಟಕದ ಹೆಸರಿನಲ್ಲಿ ಧಾರವಾಡದ ಕೆಲವು ಕುತಂತ್ರ ರಾಜಕೀಯ ಶಕ್ತಿಗಳಿಂದಾಗಿ ರಾಯಚೂರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಭಾರಿ ಅನ್ಯಾಯವಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಈ ಭಾಗದ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಐಐಟಿ ಧಾರವಾಡ ಜಿಲ್ಲೆಯ ಪಾಲಾಗಿದೆ. ಈಗ ಏಮ್ಸ್ ಆರೋಗ್ಯ ಸಂಸ್ಥೆಯನ್ನು ಮಂಜೂರು ಮಾಡಲೇಬೇಕು’ ಎಂದು ಒತ್ತಾಯಿಸಿದರು.

ಹೋರಾಟಗಾರರಾದ ವಕೀಲ ಎಸ್.ಮಾರೆಪ್ಪ ಹಾಗೂ ಡಾ.ಶಾರದಾ ಹುಲಿನಾಯಕ ಮಾತನಾಡಿದರು.

ಏಮ್ಸ್ ಹೋರಾಟದ ಪ್ರಧಾನ ಸಂಚಾಲಕ ಬಸವರಾಜ ಕಳಸ, ಅಶೋಕ ಕುಮಾರ ಜೈನ್,  ಜಾನ್ ವೆಸ್ಲಿ, ಎಂ.ಆರ್.ಭೇರಿ, ಬಾಬುರಾವ್ ಶೇಗುಣಸಿ, ವೀರಣ್ಣ ಶೆಟ್ಟಿ ಭಂಡಾರಿ, ಶ್ರೀನಿವಾಸ ನಾಗಲದಿನ್ನಿ, ರಮೇಶ ರಾವ್ ಕಲ್ಲೂರ್ಕರ್, ಎಸ್.ತಿಮ್ಮಾರೆಡ್ಡಿ, ಜಸವಂತ್ ರಾವ್ ಕಲ್ಯಾಣಕಾರಿ, ವೆಂಕಟರೆಡ್ಡಿ ದಿನ್ನಿ, ಮಲ್ಲನಗೌಡ ಹದ್ದಿನಾಳ, ಚಂದ್ರಶೇಖರ ಭಂಡಾರಿ, ವೀರಭದ್ರಯ್ಯ ಸ್ವಾಮಿ, ವೀರೇಶ ಬಾಬು ಹಾಗೂ ಪಂಪಣ್ಣ ಗೌಡ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.