ADVERTISEMENT

ರಾಯಚೂರು: ದೇವಸ್ಥಾನದ ಹುಂಡಿಯಲ್ಲಿದ್ದ ಹಣ ಕಳವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:40 IST
Last Updated 23 ಫೆಬ್ರುವರಿ 2024, 15:40 IST
ರಾಯಚೂರಿನ ಎಲ್‌ಬಿಎಸ್ ನಗರದಲ್ಲಿರುವ ತಾಯಮ್ಮ ದೇವಸ್ಥಾನ
ರಾಯಚೂರಿನ ಎಲ್‌ಬಿಎಸ್ ನಗರದಲ್ಲಿರುವ ತಾಯಮ್ಮ ದೇವಸ್ಥಾನ   

ರಾಯಚೂರು: ರಾಯಚೂರಿನ ಎಲ್‌.ಬಿ.ಎಸ್‌ ನಗರ ವ್ಯಾಪ್ತಿಯ ಅಲ್ಲಮಪ್ರಭು ಕಾಲೊನಿಯ ತಾಯಮ್ಮ ದೇವಸ್ಥಾನದಲ್ಲಿ ಗುರುವಾರ ಸಂಜೆ ಹುಂಡಿಯಲ್ಲಿನ ಹಣ ಕಳವು ಮಾಡಲಾಗಿದೆ.

ಹುಂಡಿ ಒಡೆದ ಕಿಡಿಗೇಡಿಗಳು ಹುಂಡಿಯಲ್ಲಿನ ಹಣ ದೋಚಿ ಪರಾರಿಯಾಗಿದ್ದಾರೆ. ದೇವಸ್ಥಾನ ಸಮಿತಿಯಿಂದ‌ ಸ್ಥಳೀಯ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಲಾಗಿದೆ.

‘ಹುಂಡಿಯಲ್ಲಿ ಎಷ್ಟು ಮೊತ್ತದ ಹಣವಿತ್ತು ಎಂಬ ಅಂದಾಜಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.