ಲಿಂಗಸುಗೂರು: ಶಬರಿಮಲೆಯ ತಿಂಗಳ ಪೂಜೆ (ಈದವಮ್) ನಿಮಿತ್ತ ಪಟ್ಟಣದ ಸ್ವಾಮಿ ಅಯ್ಯಪ್ಪ ದೇವಸ್ಥಾನದಿಂದ 25ಕ್ಕೂ ಹೆಚ್ಚು ಮಾಲಾಧಾರಿಗಳು ಇರುಮುಡಿ ಸಮೇತ ಶರಬರಿಮಲೆ ಯಾತ್ರೆ ಕೈಗೊಂಡರು.
ಅಯ್ಯಪ್ಪಸ್ವಾಮಿ ಮೂರ್ತಿಗೆ ಅಭಿಷೇಕ, ಮಹಾಮಂಗಳಾರತಿ ಮಾಡಲಾಯಿತು. ಹದಿನೆಂಟು ಮೆಟ್ಟಿಲು ಪೂಜೆ ನೆರವೇರಿಸಿ ಇರುಮುಡಿ ಪೂಜೆ ಸಲ್ಲಿಸಲಾಯಿತು.
ಮೇ ತಿಂಗಳ ಪೂಜಾ ದರ್ಶನ ಮೇ 14ರಿಂದ ಆರಂಭಗೊಂಡಿದ್ದು, ಮೇ 19ಕ್ಕೆ ಮುಕ್ತಾಯಗೊಳ್ಳಲಿದೆ. ಬಹುತೇಕ ಮಾಲಾಧಾರಿಗಳು ಕ್ರೂಸರ್ ಮತ್ತು ರೈಲಿನ ಮೂಲಕ ತೆರಳಿದರು.
ಗುರುಸ್ವಾಮಿಗಳಾದ ಈರಣ್ಣ, ಸಿದ್ದರಾಮಪ್ಪ, ಕಂಠಯ್ಯಸ್ವಾಮಿ, ಈರಪ್ಪ ಗುಂಡಸಾಗರ ನೇತೃತ್ವದಲ್ಲಿ ಬುಧವಾರ ಮಧ್ಯರಾತ್ರಿ ಪ್ರಯಾಣ ಬೆಳೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.