ADVERTISEMENT

ಕನಕಪುರ: ಹೊಸದುರ್ಗದಲ್ಲಿ ವಿಕಸಿತ ಭಾರತ ಯಾತ್ರೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2024, 4:30 IST
Last Updated 5 ಜನವರಿ 2024, 4:30 IST
ಕನಕಪುರ ಹೊಸದುರ್ಗ ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್‌ ಕೈಗಾರಿಕಾ ರಾಜ್ಯ ಸಚಿವ ಕೃಷ್ಣಲಾಲ್‌ ಗುರ್ಜಲ್‌, ಸಿ.ಪಿ.ಯೋಗೇಶ್ವರ ಉಪಸ್ಥಿತರಿದ್ದರು
ಕನಕಪುರ ಹೊಸದುರ್ಗ ಗ್ರಾಮ ಪಂಚಾಯಿತಿಯಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್‌ ಕೈಗಾರಿಕಾ ರಾಜ್ಯ ಸಚಿವ ಕೃಷ್ಣಲಾಲ್‌ ಗುರ್ಜಲ್‌, ಸಿ.ಪಿ.ಯೋಗೇಶ್ವರ ಉಪಸ್ಥಿತರಿದ್ದರು   

ಕನಕಪುರ: ಕೋಡಿಹಳ್ಳಿ ಹೋಬಳಿ ಹೊಸದುರ್ಗ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಸವಲತ್ತು ಮತ್ತು ಯೋಜನೆಗಳನ್ನು ಸಾರ್ವಜನಿಕವಾಗಿ ತಿಳಿಸಿ ಜಾಗೃತಿ ಮೂಡಿಸಲು ವಿಕಸಿತ ಭಾರತ ಸಂಕಲ್ಪ ಯಾತ್ರೆ ಗುರುವಾರ ನಡೆಯಿತು.

ಕೇಂದ್ರದ ಬೃಹತ್‌ ಕೈಗಾರಿಕಾ ರಾಜ್ಯ ಸಚಿವ ಕೃಷ್ಣಲಾಲ್‌ ಗುರ್ಜಲ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರಾಮೀಣರು, ಬುಡಕಟ್ಟು ಸಮುದಾಯ, ಮಹಿಳೆಯರು, ಹಿಂದುಳಿದವರು, ರೈತರ ಕಲ್ಯಾಣಕ್ಕಾಗಿ ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ADVERTISEMENT

ನರೇಗಾ ಯೋಜನೆ, ಜಲಜೀವನ್‌ ಮಿಷನ್‌, ಉಜ್ವಲ್‌ ಯೋಜನೆಗಳಿಂದ ಗ್ರಾಮೀಣ ಅಭಿವೃದ್ಧಿ ಆಗುತ್ತಿದೆ ಎಂದರು.

ವಿಧಾನ ಪ‍ರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ ಮಾತನಾಡಿ, ನರೇಗಾ ಯೋಜನೆ ಈ ಭಾಗದಲ್ಲಿ ಹೆಚ್ಚು ಅನುಷ್ಠಾನಗೊಂಡಿದೆ. ಇದರಿಂದ ರೈತರು ಹೆಚ್ಚು ಪ್ರಗತಿ ಕಂಡಿದ್ದಾರೆ ಎಂದರು.

‌ಕಾರ್ಯಕ್ರಮದಲ್ಲಿ ಪಿಡಿಒ ಎನ್‌.ಎಸ್‌.ರಘು, ಪಂಚಾಯಿತಿ ಸದಸ್ಯರಾದ ರಾಜೇಂದ್ರ, ನಾಗರಾಜು, ರಾಮಚಂದ್ರ, ಮಧುಸೂಧನ್‌ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.