ADVERTISEMENT

ಲವ್‌ ಜಿಹಾದ್‌ ತಡೆಗೆ ಕರಪತ್ರ ಅಭಿಯಾನ

ಲವ್ ಜಿಹಾದ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 16:48 IST
Last Updated 7 ಜುಲೈ 2024, 16:48 IST
ಕನಕಪುರ ನಗರದಲ್ಲಿ ಲವ್‌ ಜಿಹಾದ್‌ ತಡೆಗಾಗಿ ಕರಪತ್ರ ಅಭಿಯಾನ ನಡೆಸಿದ ಶ್ರೀರಾಮ ಸೇನೆ ಪದಾಧಿಕಾರಿಗಳು
ಕನಕಪುರ ನಗರದಲ್ಲಿ ಲವ್‌ ಜಿಹಾದ್‌ ತಡೆಗಾಗಿ ಕರಪತ್ರ ಅಭಿಯಾನ ನಡೆಸಿದ ಶ್ರೀರಾಮ ಸೇನೆ ಪದಾಧಿಕಾರಿಗಳು   

ಕನಕಪುರ: ಲವ್ ಜಿಹಾದ್‌ ಪ್ರಕರಣ ತಡೆಗಟ್ಟಲು ಶ್ರೀರಾಮ ಸೇನೆ ತೆರೆದಿರುವ ಸಹಾಯವಾಣಿ ಬಗ್ಗೆ ಸಾರ್ವಜನಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಶ್ರೀರಾಮ ಸೇನೆ ಸಂಘಟನೆಯಿಂದ ನಗರದಲ್ಲಿ ಗುರುವಾರ ನಡೆಯಿತು.

ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ನಾಗಾರ್ಜುನ್‌ಗೌಡ ಹಾಗೂ ಪದಾಧಿಕಾರಿಗಳು ಶಾಲಾ ಕಾಲೇಜುಗಳಲ್ಲಿ ಕರಪತ್ರವನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಹಂಚಿ ಲವ್ ಜಿಹಾದ್ ಬಗ್ಗೆ ಎಚ್ಚರ ವಹಿಸುವಂತೆ ಜಾಗೃತಿ ಮೂಡಿಸಿದರು.

ಸಂಘಟನೆ ಪದಾಧಿಕಾರಿಗಳು ಅಭಿಯಾನ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.