ADVERTISEMENT

ಚನ್ನಪಟ್ಟಣ ಉಪಚುನಾವಣೆ | ಡಿ.ಕೆ. ಸುರೇಶ್ ಗೆಲುವಿಗೆ ಮಾಜಿ ಶಾಸಕನಿಂದ ಚಂಡಿಕಾಯಾಗ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 12:48 IST
Last Updated 16 ಅಕ್ಟೋಬರ್ 2024, 12:48 IST
<div class="paragraphs"><p>ಮಾಜಿ ಶಾಸಕ ಎಂ.ಸಿ. ಅಶ್ವಥ್ ಮತ್ತು&nbsp;ಡಿ.ಕೆ. ಸುರೇಶ್</p></div>

ಮಾಜಿ ಶಾಸಕ ಎಂ.ಸಿ. ಅಶ್ವಥ್ ಮತ್ತು ಡಿ.ಕೆ. ಸುರೇಶ್

   

ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಸ್ಪರ್ಧಿಸಲಿದ್ದಾರೆ’ ಎಂದಿರುವ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಕಾಂಗ್ರೆಸ್ ಮುಖಂಡ ಎಂ.ಸಿ. ಅಶ್ವಥ್, ‘ಸುರೇಶ್ ಗೆದ್ದು ಸರ್ಕಾರದಲ್ಲಿ ಸಚಿವರಾಗಲಿ ಎಂದು ನಮ್ಮ ಕುಟುಂಬದಿಂದ ಕೊಲ್ಲೂರಿನ ಮೂಕಾಂಬಿಕೆ ದೇವಸ್ಥಾನದಲ್ಲಿ ಗುರುವಾರ ಚಂಡಿಕಾಯಾಗ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

ಈ ಕುರಿತು ಬುಧವಾರ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಪಕ್ಷದ ಅಭ್ಯರ್ಥಿ ಗೆಲ್ಲಬೇಕು, ನಾಯಕರು ಹಾಗೂ ಮುಖಂಡರಿಗೆ ಒಳ್ಳೆಯದಾಗಬೇಕು. ಪಕ್ಷದ ಚಿಹ್ನೆಗೆ ಗೆಲುವು ತಂದು ಕೊಡಬೇಕು ಎಂದು ಯಾಗ ಮಾಡಿಸುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.