ಚನ್ನಪಟ್ಟಣ(ರಾಮನಗರ): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಗುರುವಾರ ಒಂದೇ ದಿನ 17 ಅಭ್ಯರ್ಥಿಗಳಿಂದ 20 ನಾಮಪತ್ರ ಸಲ್ಲಿಕೆಯಾಗಿವೆ. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರೇ ಮೂರು ನಾಮಪತ್ರ ಸಲ್ಲಿಸಿದ್ದಾರೆ.
ಉಳಿದಂತೆ ಪಕ್ಷೇತರ ಅಭ್ಯರ್ಥಿ ಪ್ರದೀಪ್ ಟಿ.ವಿ 2, ಕರ್ನಾಟಕ ಜನತಾ ಪಕ್ಷದ ಎಸ್. ಶಿವಕುಮಾರ್, ಪೂರ್ವಾಚಲ್ ಮಹಾ ಪಂಚಾಯತ್ ಪಕ್ಷದ ಎಚ್.ಡಿ. ರೇವಣ್ಣ, ಕಂಟ್ರಿ ಸಿಟಿಜನ್ ಪಾರ್ಟಿಯ ಜೆ.ಟಿ. ಪ್ರಕಾಶ್, ಚಿಕ್ಕಸಿದ್ದಯ್ಯ, ರಮೇಶ್ ಎಚ್.ಆರ್, ಅರವಿಂದ್, ಯೋಗೇಶ್, ಎಂ.ಎಸ್. ಯೋಗೇಶ್, ಡಾ. ಚಂದ್ರೇಗೌಡ ಎಚ್.ಎಸ್, ಅನಿಲ್ ಕುಮಾರ್ ಎಂ., ಕುಮಾರಸ್ವಾಮಿ, ನಿಂಗರಾಜ್ ಜಿ, ಶ್ರೀನಿವಾಸ ಮೂರ್ತಿ ಎಚ್.ಕೆ, ಮಹದೇವಸ್ವಾಮಿ ಬಿ.ಎಂ. ಹಾಗೂ ಎಚ್.ಪಿ. ನಂಜೇಗೌಡ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.