ADVERTISEMENT

ಚಿಕ್ಕಕಲ್‌ಬಾಳು ಡೇರಿಗೆ ಅಧ್ಯಕ್ಷ, ಉಪಾಧ್ಯಕ್ಷ ಅಯ್ಕೆ

ಆಯ್ಕೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 7:40 IST
Last Updated 24 ಜೂನ್ 2024, 7:40 IST
ತಾಲೂಕಿನ ಚಿಕ್ಕಕಲ್‌ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಮುದ್ದೇಗೌಡ, ಉಪಾಧ್ಯಕ್ಷರಾಗಿ ಕೆ.ಪಿ.ಸುನೀತ ಅವಿರೋಧವಾಗಿ ಆಯ್ಕೆಯಾದರು. ಜಗದೀಶ್, ಸುರೇಶ್, ಸಿದ್ದರಾಜು, ಬಸವರಾಜು ಸೇರಿದಂತೆ ನಿರ್ದೇಶಕರು ಹಾಜರಿದ್ದರು
ತಾಲೂಕಿನ ಚಿಕ್ಕಕಲ್‌ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಮುದ್ದೇಗೌಡ, ಉಪಾಧ್ಯಕ್ಷರಾಗಿ ಕೆ.ಪಿ.ಸುನೀತ ಅವಿರೋಧವಾಗಿ ಆಯ್ಕೆಯಾದರು. ಜಗದೀಶ್, ಸುರೇಶ್, ಸಿದ್ದರಾಜು, ಬಸವರಾಜು ಸೇರಿದಂತೆ ನಿರ್ದೇಶಕರು ಹಾಜರಿದ್ದರು   

ಹಾರೋಹಳ್ಳಿ: ತಾಲ್ಲೂಕಿನ ಚಿಕ್ಕಕಲ್‌ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್‌ನ ಮುದ್ದೇಗೌಡ ಹಾಗೂ ಉಪಾಧ್ಯಕ್ಷರಾಗಿ ಕೆ.ಪಿ.ಸುನೀತ ಅವಿರೋಧವಾಗಿ ಆಯ್ಕೆಯಾದರು.

11 ಮಂದಿ ಸದಸ್ಯರುಳ್ಳ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದರು. ಅವರಲ್ಲಿ ಅಧ್ಯಕ್ಷರಾಗಿ ಮುದ್ದೇಗೌಡ, ಉಪಾಧ್ಯಕ್ಷರಾಗಿ ಕೆ.ಪಿ.ಸುನೀತ ಇಬ್ಬರೇ ತಲಾ ಒಂದು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಡಿ.ಆರ್.ಕಚೇರಿ ಚುನಾವಣಾಧಿಕಾರಿಯಾಗಿದ್ದ ಪುರುಷೋತ್ತಮ್ ಫಲಿತಾಂಶ ಪ್ರಕಟಿಸಿದರು.

ನಿರ್ದೇಶಕರಾದ ಶಿವರಾಜು, ಚಂದ್ರಯ್ಯ, ಚಂದ್ರಶೇಖರ, ಗೋವಿಂದ, ಗುರುಮೂರ್ತಿ, ಸುನಿಲ್‌ಕುಮಾರ್, ರತ್ನಮ್ಮ, ರಮ್ಯ, ಪವಿತ್ರ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಅಭಿನಂದನೆ: ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಗ್ರಾ.ಪಂ ಅಧ್ಯಕ್ಷ ಪಿಚ್ಚನಕೆರೆ ಜಗದೀಶ್, ಮಾಜಿ ಅಧ್ಯಕ್ಷ ಗೊಲ್ಲಹಳ್ಳಿ ಸುರೇಶ್, ಮುಖಂಡರಾದ ಸಿದ್ದರಾಜು, ಬಸವರಾಜು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.