ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಐ.ಗೊಲ್ಲಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ನುಜಾತ್ ಉನ್ನಿಸ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿಯ ಅಧ್ಯಕ್ಷರಾಗಿದ್ದ ಉಮೇಶ್ ಅವರು ನೀಡಿದ್ದ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಜಿಲ್ಲಾ ಪಂಚಾಯಿತಿ ಎಇಇ ಚಂದ್ರಶೇಖರ್ ಚುನಾವಣಾ ಅಧಿಕಾರಿಯಾಗಿ ಹಾಗೂ ಪ್ರಭಾರ ಪಿಡಿಒ ಶಿಲ್ಪಾ ಸಿ. ಸಹಾಯಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಪಂಚಾಯಿತಿಯ ಉಪಾಧ್ಯಕ್ಷೆ ಸ್ವಪ್ನ ಬಿ.ಎಸ್., ಸದಸ್ಯರಾದ ಸುಶೀಲಾ ಬಾಯಿ, ಶಿವಣ್ಣೇಗೌಡ, ನಾರಾಯಣ, ಮಂಜುನಾಥ ಕೆ., ಮಹಾದೇವಮ್ಮ, ವೆಂಕಟಮ್ಮ, ಉಮೇಶ್, ಶ್ವೇತಾ ಎಂ.ಎಸ್., ಸುಮಲತಾ, ಶೋಭಾಬಾಯಿ, ಪುಟ್ಟ ಮಾದಮ್ಮ, ಚಿಕ್ಕಮುನಿಯ ಬೋವಿ, ದೀಪು.ಎಸ್.ಎನ್, ಹೇಮಂತಗೌಡ.ಎಂ.ವಿ, ಕಾಂತರಾಜು ಟಿ, ಚಂದ್ರಕಲಾ ಟಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ಮುಖಂಡರಾದ ಶಿವಕುಮಾರ್, ಅಪ್ರೋಜ್ ಖಾನ್, ರಾಘವೇಂದ್ರ, ಕರಿಯಪ್ಪ, ನಾಜಿರ್ ಅಲಿಖಾನ್, ಸೀನಪ್ಪ, ಕುಮಾರ ಟಿ.ಎಸ್., ಮಾರೇಗೌಡ, ಸುಂಪಿಗೆಗೌಡ, ಇ.ತಮ್ಮೇಗೌಡ, ಕಾಳಮಾರೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.