ADVERTISEMENT

ಹನುಮ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2024, 7:38 IST
Last Updated 1 ಮಾರ್ಚ್ 2024, 7:38 IST
ಹಾರೋಹಳ್ಳಿ ಪಟ್ಟಣದ ಅರುಣಚಲೇಶ್ವರ ದೇವಸ್ಥಾನದ ಹತ್ತಿರ ಹನುಮ ಜಯಂತಿ ಆಚರಣೆ ಮಾಡಲಾಯಿತು
ಹಾರೋಹಳ್ಳಿ ಪಟ್ಟಣದ ಅರುಣಚಲೇಶ್ವರ ದೇವಸ್ಥಾನದ ಹತ್ತಿರ ಹನುಮ ಜಯಂತಿ ಆಚರಣೆ ಮಾಡಲಾಯಿತು   

ಹಾರೋಹಳ್ಳಿ: ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಹನಮ ಜಯಂತಿ ಆಚರಣೆ ಮಾಡಲಾಯಿತು.

ಹಾರೋಹಳ್ಳಿ ಪಟ್ಟಣದ ಅರುಣಚಲೇಶ್ವರ ದೇವಸ್ಥಾನದ ಹತ್ತಿರ ಭಾನುವಾರ ಹನುಮ ಜಯಂತಿ ಆಚರಣೆ ಮಾಡಿದ್ದು ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಪ್ರಸಾದ ವಿನಿಯೋಗ ನಡೆಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಆಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡ ಗೌತಮ್ ಮರಿಲಿಂಗೆ ಗೌಡ್ರು,ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಆನಂದ್ ಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಪಿಚ್ಚನಕೆರೆ, ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುರಳೀಧರ್ ಎಚ್ಎಸ್ , ಜಿಲ್ಲಾ ಬಜರಂಗದಳ ಸಂಯೋಜಕ ಕಿರಣ್ ಕೋಟೆ, ರಮೇಶ್ ನಾಯಕ್,ಮಧುಸೂದನ್ ಶೆಟ್ಟಿ, ಸೋಮಣ್ಣ, ಪ್ರಕಾಶ್, ಮಹೇಂದ್ರ, ಗೋವರ್ಧನ್ ಸಿಂಗ್, ಪುನೀತ್ ಜಯನಗರ,ನಾಗಣ್ಣ ,ಶೇಷಾದ್ರಿ ರಾಮು ಗಾಣಳುದೊಡ್ಡಿ, ಭಾನು ಪ್ರಕಾಶ್ ಇತರರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.