ಕನಕಪುರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗೆಲ್ಲುತ್ತಾರೆ ಎಂದು ಒಂದು ಗುಂಪು ಮೇಕೆಯನ್ನು ಬಾಜಿ ಕಟ್ಟಿದರೆ, ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ಗೆಲ್ಲುತ್ತಾರೆ ಎಂದು ಮತ್ತೊಂದು ಕಡೆಯವರು ಟಗರನ್ನು ಬಾಜಿ ಕಟ್ಟಿದ್ದಾರೆ.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಚಂದ್ರಪ್ಪ ಗರಳಾಪುರ, ಏರಂಗೆರೆ ಕುಮಾರ್ ಎಂಬುವರು ಕಾಂಗ್ರೆಸ್ ಅಭ್ಯರ್ಥಿ ಪರ ಮೇಕೆಯನ್ನು, ಬಿಜೆಪಿ ಅಭ್ಯರ್ಥಿ ಪರ ಚನ್ನಸಂದ್ರದ ಶಿವಮುತ್ತು ಟಗರನ್ನು ಬಾಜಿ ಕಟ್ಟಿದ್ದಾರೆ.
ಎರಡೂ ಕಡೆಯವರು ಸ್ನೇಹಿತರಾಗಿದ್ದು, ಭಿನ್ನ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಬೆಂಬಲಿಗರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.