ADVERTISEMENT

ಮಡಿವಾಳ ವಧು-ವರ ಜಾಗೃತಿ ಸಮಾವೇಶ   

ಸಮಾವೇಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:53 IST
Last Updated 13 ಜೂನ್ 2024, 16:53 IST
ಫೋಟೊ 13Magadi2 : ಆರ್.ವೆಂಕಟರಮಣಪ್ಪ ಭಾವಚಿತ್ರ
ಫೋಟೊ 13Magadi2 : ಆರ್.ವೆಂಕಟರಮಣಪ್ಪ ಭಾವಚಿತ್ರ   

ಮಾಗಡಿ: ಜೂ.16ರಂದು ಬೆಳಗ್ಗೆ 11ಕ್ಕೆ ಬೆಂಗಳೂರು ನಾಗದೇವನಹಳ್ಳಿ ಬಳಿಯ ಕೃಪಾ ಪಾರ್ಟಿ ಹಾಲ್‌ನಲ್ಲಿ ಮಡಿವಾಳ ವಧು-ವರರ ಉಚಿತ ಮಾಹಿತಿ ಜಾಗೃತಿ ಸಮಾವೇಶ ಏರ್ಪಡಿಸಲಾಗಿದೆ ಎಂದು ಆರ್.ಆರ್.ವಧು-ವರ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಆರ್.ವೆಂಕಟರಮಣಪ್ಪ (ಪಾಪಣ್ಣ) ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಾದ್ಯಂತ ಇರುವ ಮಡಿವಾಳ ಬಂಧುಗಳು, ವಧು-ವರ ಪೋಷಕರು ಈ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. 

ಚಿತ್ರದುರ್ಗ ಮಡಿವಾಳ ಮಠದ ಬಸವ ಮಾಚಿದೇವ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.

ADVERTISEMENT

ಕಾರ್ಯಕ್ರಮದಲ್ಲಿ ಚಿತ್ರನಟಿ ಭಾವನಾ, ಬಿಬಿಎಂಪಿ ಮಾಜಿ ಸದಸ್ಯರಾದ ಮಂಜುನಾಥ್, ಸವಿತಾ ಕೃಷ್ಣಪ್ಪ, ರಾಜ್ಯ ಮಡಿವಾಳರ ಸಂಘದ ಮಾಜಿ ಕಾರ್ಯದರ್ಶಿ ಯಲ್ಲಪ್ಪ, ಆರ್.ಕೆ.ಬಿಲ್ಡರ್ ರವಿಕುಮಾರ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.