ಮಾಗಡಿ (ಕುದೂರು): ಮಾಗಡಿ - ರಾಮನಗರ ಮುಖ್ಯ ರಸ್ತೆ ಬಳಿ ನಿಯಂತ್ರಣ ದ್ವಿಚಕ್ರ ವಾಹನವೊಂದು ಫುಟ್ಪಾತ್ನಲ್ಲಿ ಬಿದ್ದು ಸ್ಥಳದಲ್ಲೇ ಬೈಕ್ ಹಿಂಬದಿ ಸವಾರ ಮೃತಪಟ್ಟಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ.
ಮಾಗಡಿ ತಾಲ್ಲೂಕಿನ ಮಾಡ್ ಬಾಳ್ ಹೋಬಳಿಯ ಗುಡ್ಡಹಳ್ಳಿ ಗ್ರಾಮದ ರಮೇಶ (38)ಮೃತರು. ಬೈಕ್ ಸವಾರ ತುಮಕೂರಿನ ಮಂಜುನಾಥ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.
ಈ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.