ರಾಮನಗರ: ಬೆಂಗಳೂರು ಪದವೀಧರರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆಯ ಮತದಾನವು ಜೂನ್ 3ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಗಡಿ: ಕುದೂರು ಹೋಬಳಿಯ ಕುದೂರು ಗ್ರಾಮ ಪಂಚಾಯಿತಿ ಕಚೇರಿ, ತಿಪ್ಪಸಂದ್ರ ಹೋಬಳಿಯ ಗ್ರಾ.ಪಂ. ಕಚೇರಿ, ಸೋಲೂರು ಹೋಬಳಿಯ ಗ್ರಾ.ಪಂ. ಕಚೇರಿ, ಮಾಗಡಿ ತಹಶೀಲ್ದಾರ್ ಕಚೇರಿಯ ಕೋರ್ಟ್ ಹಾಲ್ನ ಕೊಠಡಿ ಸಂಖ್ಯೆ– 1 ಹಾಗೂ ತಹಶೀಲ್ದಾರ್ ಗ್ರೇಡ್– 1 ಕಚೇರಿಯ ಕೊಠಡಿ ಸಂಖ್ಯೆ– 2, ತಹಶೀಲ್ದಾರ್ ಕಚೇರಿಯ ಆಡಳಿತಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ– 3.
ರಾಮನಗರ: ನಗರದ ಬಿ.ಎಂ. ರಸ್ತೆಯ ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರರ ಕಚೇರಿಯ ಕೊಠಡಿ ಸಂಖ್ಯೆ– 1, 2, 3 ಹಾಗೂ 4, ಕೈಲಾಂಚ ಹೋಬಳಿಯ ಕೈಲಾಂಚ ಗ್ರಾಮದ ಜಿಎಚ್ಪಿಎಸ್ ಶಾಲೆಯ ಕೊಠಡಿ ಸಂಖ್ಯೆ– 2, ಕೂಟಗಲ್ ಹೋಬಳಿಯ ಕೂಟಗಲ್ ಗ್ರಾಮದ ಜಿಎಚ್ಪಿಎಸ್ ಶಾಲೆಯ ಕೊಠಡಿ ಸಂಖ್ಯೆ– 2, ಬಿಡದಿ ಪಟ್ಟಣದ ಪುರಸಭೆಯ ಜಿಎಚ್ಪಿಎಸ್ನ ಕೊಠಡಿ ಸಂಖ್ಯೆ– 1 ಹಾಗೂ 2.
ಚನ್ನಪಟ್ಟಣ: ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯ ಕೊಠಡಿ ಸಂಖ್ಯೆ– 1 ಹಾಗೂ 2, ತಾಲ್ಲೂಕು ಪಂಚಾಯತ್ ಕಚೇರಿ, ಸಾಮರ್ಥ್ಯ ಸೌಧದ ತರಬೇತಿ ಕೇಂದ್ರ, ದೊಡ್ಡ ಮಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ– 1 ಹಾಗೂ 2, ಕೋಡಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕೊಠಡಿ ಸಂಖ್ಯೆ –1 ಹಾಗೂ 2.
ಹಾರೋಹಳ್ಳಿ: ತಾಲ್ಲೂಕಿನ ಕೆಪಿಎಸ್ ಜಿಎಚ್ಪಿಎಸ್ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 1 ಮತ್ತು 2.
ಕನಕಪುರ: ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯ ಕೊಠಡಿ ಸಂಖ್ಯೆ 1, 2, 3 ಹಾಗೂ 4.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.