ADVERTISEMENT

ಕುದೂರು | ಅಪಘಾತ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 14 ಮೇ 2024, 15:28 IST
Last Updated 14 ಮೇ 2024, 15:28 IST

ಕುದೂರು: ಮಾಗಡಿ– ಗವಿನಾಗಮಂಗಲ ಮುಖ್ಯರಸ್ತೆಯ ಕಪ್ಪನಪಾಳ್ಯ ಗ್ರಾಮದ ಬಳಿ ಇರುವ ಕೆಬಿಬಿ ಪ್ಲಾಂಟ್ ಬಳಿ ಭಾನುವಾರ ಅಪರಿಚಿತ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬನಿಗೆ ಗಾಯವಾಗಿದೆ.

ಮಾಡಬಾಳ್ ಹೋಬಳಿಯ ಯಲಚಿಕಟ್ಟೆ ಪಾಳ್ಯ ಗ್ರಾಮದ ತಿಮ್ಮಯ್ಯ ಮೃತಪಟ್ಟವರು. ಮುದುಗಿರಿ ಗೌಡ ಎಂಬುವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.