ADVERTISEMENT

ಮಾಗಡಿ | ತಟ್ಟಕೆರೆ ರಂಗನಾಥ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 5:57 IST
Last Updated 17 ಫೆಬ್ರುವರಿ 2024, 5:57 IST
ಮಾಗಡಿ ಸೋಲೂರು ಹೋಬಳಿ ತಟ್ಟೆಕೆರೆಯಲ್ಲಿ ಶುಕ್ರವಾರ ರಂಗನಾಥ ರಥೋತ್ಸವ ನಡೆಯಿತು
ಮಾಗಡಿ ಸೋಲೂರು ಹೋಬಳಿ ತಟ್ಟೆಕೆರೆಯಲ್ಲಿ ಶುಕ್ರವಾರ ರಂಗನಾಥ ರಥೋತ್ಸವ ನಡೆಯಿತು   

ಮಾಗಡಿ: ತಾಲ್ಲೂಕಿನ ಸೋಲೂರು ಹೋಬಳಿ ತಟ್ಟೆಕೆರೆ ಬೆಟ್ಟದ ರಂಗನಾಥ ಜಾತ್ರೆಯ ಅಂಗವಾಗಿ ಶುಕ್ರವಾರ ಮಧ್ಯಾಹ್ನ ರಥೋತ್ಸವ ವೈಭವದಿಂದ ನಡೆಯಿತು.

ಹೋಮ–ಹವನಗಳು ನಡೆದ ನಂತರ ಅಲಂಕೃತ ರಂಗನಾಥ ಮತ್ತು ಉಭಯ ಅಮ್ಮನವರನ್ನು ಅಲಂಕೃತ ರಥದ ಮೇಲಿಟ್ಟು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗೊರೂರು, ಸೋಲೂರು, ತಟ್ಟೆಕೆರೆ ಹಾಗೂ ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು. ನವದಂಪತಿಗಳು ರಥದ ಮೇಲೆ ಜೋಡಿ ಬಾಳೆಹಣ್ಣು ಎಸೆದು ಹರಕೆ ಸಲ್ಲಿಸಿದರು. ಸಾಮೂಹಿಕ ಅನ್ನದಾನ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.