ಕನಕಪುರ: ಇಲ್ಲಿನ ಬೆಂಗಳೂರು ರಸ್ತೆಯ ರೈಸ್ ಮಿಲ್ನಲ್ಲಿರುವ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರಿ ಸಂಘದ (ಟಿಎಪಿಸಿಎಂಎಸ್) ನೂತನ ಅಧ್ಯಕ್ಷರಾಗಿ ದೊಡ್ಡಾಲಹಳ್ಳಿ ಗ್ರಾಮದ ಮಹೇಶ್ ಎಸ್. ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೊಸೈಟಿಯ ಅಧ್ಯಕ್ಷರಾಗಿದ್ದ ಎಂ.ಎನ್. ಚಂದ್ರಶೇಖರ್ ನೀಡಿದ್ದ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು.
ಸಹಕಾರ ಇಲಾಖೆಯ ರಾಮನಗರ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ. ಮಂಜುನಾಥ್ ಚುನಾವಣಾಧಿಕಾರಿಯಾಗಿ, ಕನಕಪುರ ಸಹಕಾರ ಅಭಿವೃದ್ಧಿ ಅಧಿಕಾರಿ ಸಿ.ಆಶಾ ಸಹಾಯಕ ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷ ಕಾಳೇಗೌಡ, ನಿರ್ದೇಶಕರಾದ ಕೆ.ದೇವರಾಜು, ಟಿ.ಎಸ್.ಕೈಲಾಸ್ ಮೂರ್ತಿ, ನಾಗಯ್ಯ, ತಮ್ಮಣ್ಣಗೌಡ, ಕೆ.ಎನ್.ರಾಜೇಂದ್ರ, ಮಹಮ್ಮದ್ ಯಕ್ಬಾಲ್, ಎಂ.ಡಿ.ವಿಜಯದೇವ್, ಕೆ.ಎನ್.ನಾಗೇಶ್, ಎ.ವಿ.ಶ್ರೀನಿವಾಸ್, ಮಂಗಳಮ್ಮ, ಟಿ.ಜೆ.ವಸಂತ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಟಿಎಪಿಸಿಎಂಎಸ್ ನೌಕರರಾದ ಮಂಜುನಾಥ್.ಆರ್, ಶ್ರೀಕಂಠಯ್ಯ.ಕೆ.ಎಲ್, ದೇವರಾಜ್.ಅರ್, ನಾಗೇಶ್, ರಾಜೇಶ್ ರಾಜೆ ಅರಸು, ವೆಂಕಟಚಲಯ್ಯ, ನಾಗರಾಜು.ಕೆ, ಉಮೇಶ್.ಕೆ.ಎಂ., ವಿಧಾನ ಪರಿಷತ್ ಸದಸ್ಯ ಎಸ್.ರವಿ, ಗ್ಯಾರಂಟಿ ಯೋಜನೆಗಳ ತಾಲ್ಲೂಕು ಸಮಿತಿ ಅಧ್ಯಕ್ಷ ಕೆ.ಎನ್. ದಿಲೀಪ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷರಾದ ಕೆ.ಎಂ.ರಾಜೇಂದ್ರ, ಬಸಪ್ಪ, ಮುನುಚ್ಚೇಗೌಡ, ಮುಖಂಡರಾದ ದೊಡ್ಡಾಲಹಳ್ಳಿ ಕೃಷ್ಣಪ್ಪ, ಕೆಂಪರಾಜು, ಶಿವಣ್ಣ, ಸುರೇಶ್, ಲೋಕೇಶ್, ಶ್ರೀನಿವಾಸ್ ಸೇರಿದಂತೆ ಅನೇಕರು ಉಪಸಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.