ಕುದೂರು: ರಾತ್ರಿ ವೇಳೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಸವಾರನಿಗೆ ನಾಲ್ಕು ಜನರ ಗುಂಪೊಂದು ಹೆದರಿಸಿ ₹2ಸಾವಿರ ನಗದು, ಮೊಬೈಲ್ ಫೋನ್ ಕಳವು ಮಾಡಿರುವ ಘಟನೆ ಈಚೆಗೆ ಮಾಗಡಿ-ದಾಬಸ್ ಪೇಟೆ ಮುಖ್ಯ ರಸ್ತೆ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ರೈಲ್ವೆ ಸೇತುವೆ ಬಳಿ ನಡೆದಿದೆ.
ತುಮಕೂರು ಸಮೀಪ ಹಿರೇಹಳ್ಳಿ ಸಿದ್ದೇಗೌಡನಪಾಳ್ಯ ಗ್ರಾಮದ ನಿರ್ಮಲೇಶ್ ಹಣ ಹಾಗೂ ಮೊಬೈಲ್ ಕಳೆದುಕೊಂಡ ವ್ಯಕ್ತಿ.
ಫೋನ್ ಪೇ ಪಾಸ್ ವರ್ಡ್ ಪಡೆದು ₹35ಸಾವಿರ ಹಣ ವರ್ಗಾಯಿಸಿಕೊಂಡಿದ್ದಾರೆ.
ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.