ಕನಕಪುರ: ತಾಲ್ಲೂಕಿನ ಗೇರಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಪುಟ್ಟ ನಂಜಯ್ಯ (62) ಎಂಬುವರು ಗುರುವಾರ ಮೃತಪಟ್ಟಿದ್ದಾರೆ.
ರಾತ್ರಿ ಹೊಲದಲ್ಲಿ ಒಕ್ಕಣೆ ಮಾಡಿದ್ದ ರಾಗಿ ಹುಲ್ಲನ್ನು ಕಾಯಲು ಪುಟ್ಟ ನಂಜಯ್ಯ ಹೋಗಿದ್ದರು. ನಸುಕಿನಲ್ಲಿ ಹೊಲಕ್ಕೆ ಬಂದಿರುವ ಮೂರು ಕಾಡಾನೆಗಳ ಪೈಕಿ, ಒಂದು ಆನೆ ನಂಜಯ್ಯ ಅವರ ಅವರ ಮೇಲೆ ದಾಳಿ ನಡೆಸಿ ತಲೆ ಮೇಲೆ ಕಾಲಿಟ್ಟಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಕನಕಪುರ ತಾಲ್ಲೂಕು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.