ADVERTISEMENT

ರಾಮನಗರ: ವ್ಯಕ್ತಿ ಮೇಲೆ ಕಾಡಾನೆ ದಾಳಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 7:56 IST
Last Updated 25 ಜನವರಿ 2024, 7:56 IST
<div class="paragraphs"><p>ದಾಳಿ ನಡೆಸು‌ತ್ತಿರುವ ಕಾಡಾನೆ (ಸಾಂದರ್ಭಿಕ ಚಿತ್ರ)</p></div>

ದಾಳಿ ನಡೆಸು‌ತ್ತಿರುವ ಕಾಡಾನೆ (ಸಾಂದರ್ಭಿಕ ಚಿತ್ರ)

   

ರಾಮನಗರ: ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದಲ್ಲಿ ಕಾಡಾನೆ ತುಳಿದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ನೀರಗಂಟಿ ತಿಮ್ಮಣ್ಣ ಕಾಡಾನೆ ದಾಳಿಗೊಳಗಾದವರು.

ಬೆಳಿಗ್ಗೆ ಮನೆಗಳಿಗೆ ನೀರು ಪೂರೈಕೆ ಮಾಡಲು ಗ್ರಾಮದ ಬಳಿಯಿರುವ ಕೊಳವೆಬಾವಿಯ ಸ್ವಿಚ್ ಆನ್ ಮಾಡಲು ಹೋದಾಗ, ಕಾಡಾನೆಯೊಂದು ಏಕಾಏಕಿ ಬಂದು ದಾಳಿ ಮಾಡಿದೆ.

ADVERTISEMENT

ಘಟನೆಯಲ್ಲಿ ತಿಮ್ಮಣ್ಣನ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.