ಕೋಣಂದೂರು: ಇಲ್ಲಿನ ರಾಷ್ಟ್ರೀಯ ವಸತಿ ಶಾಲೆಯ ವಿದ್ಯಾರ್ಥಿಗಳು ಜುಲೈ 8 ಮತ್ತು 9ರಂದು ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಸಿಐಎಸ್ಸಿ ಸ್ಪೋರ್ಟ್ಸ್ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪ್ರಾಂತೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದಾರೆ.
25 ಕೆ.ಜಿ ವಿಭಾಗದಲ್ಲಿ 7ನೇ ತರಗತಿ ಮಹಮದ್ ತಬ್ಜಲ್ ದ್ವಿತೀಯ ಸ್ಥಾನ, 25-30 ಕೆ.ಜಿ. ವಿಭಾಗದಲ್ಲಿ 8ನೇ ತರಗತಿ ಎಚ್.ಎಂ.ಗುರುಪ್ರಸಾದ್ ದ್ವಿತೀಯ ಸ್ಥಾನ, 30-34 ಕೆ.ಜಿ.ವಿಭಾಗದಲ್ಲಿ 7ನೇ ತರಗತಿ ಎಚ್.ಎಂ.ಯೋಗಿನಿ ದ್ವಿತೀಯ ಸ್ಥಾನ, 56-60 ಕೆ.ಜಿ.ವಿಭಾಗದಲ್ಲಿ 9ನೇ ತರಗತಿಯ ಮಾನ್ವಿ ಶೆಟ್ಟಿ ತೃತೀಯ ಸ್ಥಾನ, 22-26 ಕೆ.ಜಿ.ವಿಭಾಗದಲ್ಲಿ 7ನೇ ತರಗತಿ ಯು.ನಮಿತಾ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜೇತ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.