ADVERTISEMENT

ನೈತಿಕ ಪೊಲೀಸ್‌ ಗಿರಿ; 25ಕ್ಕೂ ಹೆಚ್ಚು ಮಂದಿ ಮೇಲೆ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 16:25 IST
Last Updated 8 ಮಾರ್ಚ್ 2024, 16:25 IST

ತೀರ್ಥಹಳ್ಳಿ: ಹಲ್ಲೆ ಪ್ರಕರಣ ಸಂಬಂಧ 25ಕ್ಕೂ ಹೆಚ್ಚು ಜನರ ಮೇಲೆ ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗುಂಪೊಂದು ಅನೈತಿಕ ಪೊಲೀಸ್‌ಗಿರಿ ನಡೆಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದದ್ದರು ಎಂದು ಹಲ್ಲೆಗೊಳಗಾದ ಉದಯ್‌ ಕುಮಾರ್‌ ದೂರು ನೀಡಿದ್ದರು.

ಕೋಮನೆ ಗ್ರಾಮದ ಶೇಷಪ್ಪ ಗೌಡ ಎಂಬುವವರಿಂದ 8 ದನಗಳನ್ನು ಸಾಕುವ ಉದ್ದೇಶಕ್ಕೆ ವಾಹನದಲ್ಲಿ ದನಗಳನ್ನು ಸಾಗಾಣಿಕೆ ಮಾಡುತ್ತಿದೆ. ಕುರುವಳ್ಳಿಯಲ್ಲಿ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿ, ಬಾಯಿಗೆ ಬಂದಂತೆ ಬೈದು ತಳಿಸಿತು. ನನ್ನ ಜತೆಗೆ ಇದ್ದ ರಾಹಿದ್‌ ಅವರಿಗೂ ತೀವ್ರ ಪೆಟ್ಟಾಗಿದ್ದು, ಪ್ರಜ್ಞೆ ಕಳೆದುಕೊಂಡಿದ್ದಾರೆ. ಸ್ಥಳೀಯರ ಸಹಕಾರದಿಂದ ಇಬ್ಬರೂ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದೆವು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಕೆಲವರು ತಪ್ಪಿಸಿಕೊಂಡಿದ್ದು ಪೊಲೀಸರು ಶೋಧ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.