ಶಿವಮೊಗ್ಗ: ಇಲ್ಲಿನ ದುರ್ಗಿಗುಡಿ ಕನ್ನಡ ಸಂಘದಿಂದ ದುರ್ಗಿಗುಡಿ ರಸ್ತೆಯಲ್ಲಿ ನಿರ್ಮಿಸಿರುವ ವೀರ ಶಿವಪ್ಪನಾಯಕ ಭವ್ಯ ಮಂಟಪದಲ್ಲಿ ಡಿ.20ರಿಂದ 24ರವರೆಗೆ 55ನೇ ವರ್ಷದ ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಂಘದ ಮುಖಂಡ ಸ.ನ.ಮೂರ್ತಿ ತಿಳಿಸಿದ್ದಾರೆ.
ರಾಜ್ಯೋತ್ಸವದ ಅಂಗವಾಗಿ ಬುಧವಾರ ಬೆಳಿಗ್ಗೆ 10.30ಕ್ಕೆ ರಾಮಣ್ಣಶ್ರೇಷ್ಠಿ ಪಾರ್ಕ್ನಿಂದ ಭುವನೇಶ್ವರಿ ದೇವಿಯ ಅದ್ದೂರಿ ಮೆರವಣಿಗೆ ನಡೆಯಲಿದೆ. ಗಾಂಧಿ ಬಜಾರ್ ಮಾರ್ಗವಾಗಿ ಹೊರಡುವ ಮೆರವಣಿಗೆ ಶಿವಪ್ಪ ನಾಯಕ ವೃತ್ತದ ಮೂಲಕ ದುರ್ಗಿಗುಡಿಗೆ ಬಂದು ಸೇರುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು ಭಾಗವಹಿಸಲಿವೆ.
ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಡಿ.20ರಂದು ನೀತು ಮೆಲೋಡಿ ವಾದ್ಯಗೋಷ್ಠಿ, ಡಿ.21ರಂದು ಅಪೇಕ್ಷ ಮಂಜುನಾಥ್, ಭದ್ರಾವತಿ ತಂಡದಿಂದ ಚಿತ್ರಗೀತೆಗಳಿಗೆ ನೃತ್ಯ, ಡಿ.22ರಂದು ದಸೀರ ಗಾನ ಗಂಧರ್ವ ತಂಡದಿಂದ ರಸಮಂಜರಿ, ಡಿ.23ರಂದು ಪ್ರೀತಮ್ ಮತ್ತು ಸಂಗಡಿಗರಿಂದ ಗೀತ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಡಿ.24ರಂದು ಸಂಜೆ 7ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಗಾಯಕರಾದ ಸಾನ್ವಿ ಜಿ.ಭಟ್, ನಾದಿರಾ ಬಾನು, ವರ್ಣ ಚೌಹಾಣ್, ಪೃಥ್ವಿಗೌಡ, ವಿಶಾಖ ನಾಗಲಾಪುರ ಸಂಗೀತ ಸಂಜೆ ನಡೆಸಿಕೊಡುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.