ADVERTISEMENT

ಹೊಸನಗರ | ಕನ್ನಡ ಧ್ವಜಕ್ಕೆ ಕಿಡಿಗೇಡಿಗಳಿಂದ ಹಾನಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 16:08 IST
Last Updated 26 ಜೂನ್ 2024, 16:08 IST
ಹೊಸನಗರದ ರಾಷ್ಟ್ರೀಯ ಹೆದ್ದಾರಿಯ ಕೆಇಬಿ ಸರ್ಕಲ್ ಬಳಿ ಇದ್ದ ಕನ್ನಡ ಧ್ವಜ ಸ್ತಂಭಕ್ಕೆ ಹಾನಿಯಾಗಿರುವುದು
ಹೊಸನಗರದ ರಾಷ್ಟ್ರೀಯ ಹೆದ್ದಾರಿಯ ಕೆಇಬಿ ಸರ್ಕಲ್ ಬಳಿ ಇದ್ದ ಕನ್ನಡ ಧ್ವಜ ಸ್ತಂಭಕ್ಕೆ ಹಾನಿಯಾಗಿರುವುದು   

ಹೊಸನಗರ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಕೆಇಬಿ ಸರ್ಕಲ್ ಬಳಿ ಇದ್ದ ಕನ್ನಡ ಧ್ವಜ ಸ್ತಂಭವನ್ನು ಕಿಡಿಗೇಡಿಗಳು ದ್ವಂಸ ಮಾಡಿದ್ದಾರೆ.

ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಸ್ಥಳೀಯ ರಾಜರತ್ನಂ ಪುನೀತ್ ರಾಜಕುಮಾರ್ ಕನ್ನಡ ಯುವಕ ಸಂಘದವರು ಈಚೆಗೆ ನಿರ್ಮಿಸಿದ್ದ 70 ಅಡಿ ಉದ್ದದ ಕನ್ನಡ ಧ್ವಜವನ್ನು ಮಂಗಳವಾರ ರಾತ್ರಿ ದ್ವಂಸ ಮಾಡಲಾಗಿದೆ.

ಯಾವ ಕಾರಣಕ್ಕಾಗಿ ದ್ವಂಸ ಮಾಡಲಾಗಿದೆ ಎಂಬುದು ತಿಳಿಯುತ್ತಿಲ್ಲ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಸಂಘದ ಮುಖಂಡ ಪ್ರಶಾಂತ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.