ADVERTISEMENT

ಶಿವಮೊಗ್ಗ: ಮಳೆಯ ನಡುವೆಯೇ ಸಾಗಿಬಂದ ಆರ್‌ಎಸ್ಎಸ್ ವಿಜಯದಶಮಿ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 4:37 IST
Last Updated 20 ಅಕ್ಟೋಬರ್ 2024, 4:37 IST
<div class="paragraphs"><p>ಆರ್‌ಎಸ್ಎಸ್ ವಿಜಯದಶಮಿ ಪಥಸಂಚಲನ</p></div>

ಆರ್‌ಎಸ್ಎಸ್ ವಿಜಯದಶಮಿ ಪಥಸಂಚಲನ

   

ಶಿವಮೊಗ್ಗ: ವಿಜಯದಶಮಿ ಅಂಗವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ ಎಸ್ಎಸ್) ವಾರ್ಷಿಕ ಪಥ ಸಂಚಲನ ಬಿರು ಮಳೆಯ ನಡುವೆಯೇ ಭಾನುವಾರ ಬೆಳಿಗ್ಗೆ ಇಲ್ಲಿ ನಡೆಯಿತು.

ಬಿ.ಎಚ್.ರಸ್ತೆಯ ಕರ್ನಾಟಕ ಸಂಘದ ಪಕ್ಕದ ತಾನಾಜಿ ಸಂಘ ಸ್ಥಾನದಿಂದ ಬೆಳಿಗ್ಗೆ 7.30ಕ್ಕೆ ಆರಂಭವಾಗಿರುವ ಮೆರವಣಿಗೆಯಲ್ಲಿ ಗಣವೇಷಧಾರಿಗಳಾಗಿದ್ದ ಸ್ವಯಂ ಸೇವಕರು ಹೆಜ್ಜೆ ಹಾಕಿದರು.

ADVERTISEMENT

ಶಿವಮೊಗ್ಗದ ವಿಜಯದಶಮಿ ಪಥ ಸಂಚಲನ ಈ ವರ್ಷ ಶತಮಾನೋತ್ಸವದ ಸಂಭ್ರಮದಲ್ಲಿದೆ.

ಪಥಸಂಚಲನ ಗಾಂಧಿ ಬಜಾರ್, ಅಶೋಕ ರಸ್ತೆ ಮೂಲಕ ಬಿ.ಎಚ್.ರಸ್ತೆಯಲ್ಲಿ ಸಾಗಿ ಮೈಲಾರೇಶ್ವರ ದೇವಸ್ಥಾನ ತಲುಪಲಿದೆ. ಸಂಸದ ಬಿ.ವೈ.ರಾಘವೇಂದ್ರ, ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ ಪಥಸಂಚಲನದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.