ADVERTISEMENT

ನಿರುದ್ಯೋಗಿ ಯುವಕರಿಗೆ ಯುವನಿಧಿ ಸಹಕಾರಿ: ಶಾಸಕ ಬಿ.ಕೆ. ಸಂಗಮೇಶ್ವರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 14:11 IST
Last Updated 8 ಜನವರಿ 2024, 14:11 IST
ಬಿ.ಕೆ ಸಂಗಮೇಶ್ವರ
ಬಿ.ಕೆ ಸಂಗಮೇಶ್ವರ   

ಭದ್ರಾವತಿ: ‘ರಾಜ್ಯದ ವಿದ್ಯಾವಂತ ನಿರುದ್ಯೋಗಿ ಯುವಕರ ಆರ್ಥಿಕ ಭವಿಷ್ಯ ಭದ್ರವಾಗಿಸಲು ಕಾಂಗ್ರೆಸ್‌ ಸರ್ಕಾರ ಯುವನಿಧಿ ಯೋಜನೆ ಜಾರಿಗೆ ತಂದಿದೆ’ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ಹೇಳಿದರು.

‘ಜನವರಿ 12ರಂದು ಶಿವಮೊಗ್ಗದಲ್ಲಿ ಆಯೋಜಿಸಿರುವ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಕ್ಷೇತ್ರದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಯೋಜನೆಯ ತಾಲ್ಲೂಕು ಉಸ್ತುವಾರಿ ರಮೇಶ್ ಶಂಕರಘಟ್ಟ, ಮುಖಂಡರಾದ ಬಲ್ಕಿಸ್‌ ಬಾನು, ಎಸ್. ಕುಮಾರ್, ಎಲ್. ಷಡಕ್ಷರಿ, ಸುಕನ್ಯಾ ರಾಜು, ಅಫ್ತಾಬ್ ಅಹಮದ್,  ಸರ್ವ ಮಂಗಳ ಬೈರಪ್ಪ, ಚೆನ್ನಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.