ADVERTISEMENT

ಅಪಘಾತ: ಬೈಕ್‌ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 3:09 IST
Last Updated 13 ಜೂನ್ 2024, 3:09 IST
ತಿಪಟೂರು ತಾಲ್ಲೂಕಿನ ಬಾಗುವಾಳ ಗ್ರಾಮದ ಬಳಿ ಮರಕ್ಕೆ ಡಿಕ್ಕಿಯಾದ ಓಮ್ನಿ ವಾಹನ
ತಿಪಟೂರು ತಾಲ್ಲೂಕಿನ ಬಾಗುವಾಳ ಗ್ರಾಮದ ಬಳಿ ಮರಕ್ಕೆ ಡಿಕ್ಕಿಯಾದ ಓಮ್ನಿ ವಾಹನ   

ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಬಾಗುವಾಳ ಗ್ರಾಮದ ಬಳಿ ಮಂಗಳವಾರ ಟಿವಿಎಸ್‌ ಎಕ್ಸ್‌ಎಲ್‌ ಮತ್ತು ಓಮ್ನಿ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ಟಿವಿಎಸ್‌ ಎಕ್ಸ್‌ಎಲ್‌ ಸವಾರ ಲೋಕೇಶ್‌ (44) ಮೃತಪಟ್ಟಿದ್ದಾರೆ.

ಲೋಕೇಶ್‌ ಹೊನ್ನವಳ್ಳಿ ಗ್ರಾಮದ ನಿವಾಸಿ. ಹೊನ್ನವಳ್ಳಿಯಿಂದ ತಿಪಟೂರಿಗೆ ಬರುತ್ತಿದ್ದ ಟಿವಿಎಸ್‌ ಎಕ್ಸ್‌ಎಲ್‌ ಮತ್ತು ತಿಪಟೂರು ಕಡೆಯಿಂದ ಹೋಗುತ್ತಿದ್ದ ಓಮ್ನಿ ವಾಹನ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ನಂತರ ನಿಯಂತ್ರಣ ತಪ್ಪಿದ ಓಮ್ನಿ ವಾಹನ ರಸ್ತೆಯ ಪಕ್ಕದ ಮರಕ್ಕೆ ಡಿಕ್ಕಿಯಾಗಿದೆ. ಹೊನ್ನವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT