ತುಮಕೂರು: ತಾಲ್ಲೂಕಿನ ಮೈದಾಳ ಬಳಿ ಭಾನುವಾರ ರಾತ್ರಿ ಟಿವಿಎಸ್ ಎಕ್ಸ್ಎಲ್ ಮತ್ತು ಆಟೊ ಮಧ್ಯೆ ನಡೆದ ಅಪಘಾತದಲ್ಲಿ ಟಿವಿಎಸ್ ಎಕ್ಸ್ಎಲ್ ಸವಾರ ಅಂಬರೇಶ್ (55) ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆಯ ಅಂಬರೇಶ್ ತಾಲ್ಲೂಕಿನ ಬಂಡಿಹಳ್ಳಿಯಲ್ಲಿ ವಾಸವಿದ್ದರು. ಗಾರೆ ಕೆಲಸ ಮಾಡಿಕೊಂಡಿದ್ದರು. ಹಲವು ದಿನಗಳಿಂದ ಇಲ್ಲವೇ ನೆಲೆಸಿದ್ದರು. ತಡರಾತ್ರಿ ನಗರದಿಂದ ಬಂಡಿಹಳ್ಳಿಗೆ ಹೋಗುವಾಗ ಊರ್ಡಿಗೆರೆಯಿಂದ ಮಾವಿನಕಾಯಿ ತುಂಬಿಸಿಕೊಂಡು ಬರುತ್ತಿದ್ದ ಆಟೊ ಮುಖಾಮುಖಿಯಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಆಟೊ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕ್ಯಾತ್ಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.