ADVERTISEMENT

ಕೊರಟಗೆರೆ | ಅಪಘಾತ: ಕಾರು ಜಖಂ, ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2024, 4:46 IST
Last Updated 6 ಅಕ್ಟೋಬರ್ 2024, 4:46 IST
ಅಪಘಾತದಲ್ಲಿ ಜಖಂಗೊಂಡಿರುವ ಕಾರು
ಅಪಘಾತದಲ್ಲಿ ಜಖಂಗೊಂಡಿರುವ ಕಾರು   

ಕೊರಟಗೆರೆ: ತಾಲ್ಲೂಕಿನ ಐಕೆ ಕಾಲೊನಿ ಬಳಿ ಕಾರು ಹಾಗೂ ಬಸ್ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಬೆಂಗಳೂರು– ಶಿವಾಜಿನಗರ ನಿವಾಸಿಗಳಾದ ಜಯಪಾಲ್ ಹಾಗೂ ಮುಜೀದ್ ಅಹಮದ್ ಕೈಕಾಲುಗಳಿಗೆ ಪೆಟ್ಟಾಗಿದೆ. ಫಾರುಕ್ ಹಾಗೂ ಚಾಂದ್ ಅಹಮದ್ ಅವರಿಗೆ ಸಣ್ಣಪುಟ್ಟ ತರಚಿದ ಗಾಯಗಳಾಗಿದೆ.

ನಾಲ್ವರು ಶನಿವಾರ ತಾಲ್ಲೂಕಿನ ಅಕ್ಕಿರಾಂಪುರ ಸಂತೆಗೆ ಕಾರಿನಲ್ಲಿ ಬರುತ್ತಿರುವಾಗ ಐಕೆ ಕಾಲೊನಿ ಸಮೀಪದ ವಡ್ಡರಹಳ್ಳಿ ಬಳಿ ಮತ್ತೊಂದು ಕಾರನ್ನು ಹಿಂದಿಕ್ಕುವ ಭರದಲ್ಲಿ ಎದುರಿಗೆ ಬಂದ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ರಭಸಕ್ಕೆ ಕಾರು ಗುರುತು ಸಿಗದಷ್ಟು ಜಖಂಗೊಂಡಿದೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.