ADVERTISEMENT

ತಿಪಟೂರು | ವರದಕ್ಷಣೆ ಕಿರುಕುಳ: ಪ್ರಾಂಶುಪಾಲ ನಾಪತ್ತೆ 

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 15:33 IST
Last Updated 10 ಜುಲೈ 2024, 15:33 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ತಿಪಟೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಕುಮಾರಸ್ವಾಮಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಪ್ರಕರಣ ದಾಖಲಾಗಿದೆ.ಇಡೀ ಕುಟುಂಬ ಸದಸ್ಯರ ಸಮೇತ ಪ್ರಾಂಶುಪಾಲರು ನಾಪತ್ತೆಯಾಗಿದೆ.

ಪ್ರಾಂಶುಪಾಲ ಕುಮಾರಸ್ವಾಮಿ, ಪತ್ನಿ ಗೀತಾ, ಪುತ್ರ ನಿಖಿಲ್, ಪುತ್ರಿ ಐಶ್ವರ್ಯ, ಮನು ವಿರುದ್ಧ ಕುಮಾರಸ್ವಾಮಿ ಅವರ ಸೊಸೆ ಪುಷ್ಪಾ ದೂರು ನೀಡಿದ್ದಾರೆ. 

ADVERTISEMENT

ನಗರದ ನಿವಾಸಿ ಚಂದ್ರಶೇಖರ್ ಪುತ್ರಿ ಪುಷ್ಪ ಅವರೊಂದಿಗೆ ನಿಖಿಲ್ ಮದುವೆಯಾಗಿತ್ತು. ಮದುವೆ ಆದಾಗಿನಿಂದ ಪತಿ ನಿಖಿಲ್, ಮಾವ ಕುಮಾರಸ್ವಾಮಿ, ಅತ್ತೆ ಗೀತಾ, ನಾದಿನಿ ಐಶ್ವರ್ಯ ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಪುಷ್ಪಾ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.