ADVERTISEMENT

ಕುಣಿಗಲ್ | ಸರ್ಕಾರಿ ಶಾಲೆಗೆ ಕಾಯಕಲ್ಪ: ಎಂಜಿನಿಯರ್‌ ಯುವಕರ ಶ್ರಮ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 14:37 IST
Last Updated 14 ಡಿಸೆಂಬರ್ 2023, 14:37 IST
ಕುಣಿಗಲ್ ತಾಲ್ಲೂಕಿನ ಹೇರೂರ್ ಸರ್ಕಾರಿ ಶಾಲೆಗೆ ‘ಸೇವಾ ಹೀ ಪರಮೋಧರ್ಮ’ ಸಂಸ್ಥೆ ಪದಾಧಿಕಾರಿಗಳು ಕಾಯಕಲ್ಪ ನೀಡಿದರು
ಕುಣಿಗಲ್ ತಾಲ್ಲೂಕಿನ ಹೇರೂರ್ ಸರ್ಕಾರಿ ಶಾಲೆಗೆ ‘ಸೇವಾ ಹೀ ಪರಮೋಧರ್ಮ’ ಸಂಸ್ಥೆ ಪದಾಧಿಕಾರಿಗಳು ಕಾಯಕಲ್ಪ ನೀಡಿದರು   

ಕುಣಿಗಲ್: ಐಟಿ, ಬಿಟಿ ಮತ್ತು ಸರ್ಕಾರಿ ಉದ್ಯೋಗದಲ್ಲಿರುವ ಎಂಜನಿಯರ್ ಯುವಕರು ತಾಲ್ಲೂಕಿನ ಹೇರೂರ್ ಗ್ರಾಮದ ಸರ್ಕಾರಿ ಶಾಲೆಗೆ ಕಾಯಕಲ್ಪ ನೀಡಿದ್ದರೆ.

ಬೆಂಗಳೂರಿನ ‘ಸೇವಾ ಹೀ ಪರಮೋಧರ್ಮ’ ಟ್ರಸ್ಟ್‌ನಿಂದ ಶಿಥಿಲವಾಗಿದ್ದ ಹೇರೂರ್ ಸರ್ಕಾರಿ ಶಾಲೆಗೆ ಸುಂದರ ಬಣ್ಣ ಹಚ್ಚುವ ಜತೆಗೆ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಚಿತ್ರಗಳನ್ನು ರಚಿಸಿದ್ದಾರೆ.

ಸಮಾನಮನಸ್ಕ ಯುವಕರು ಸೇರಿ ಈ ಸಂಸ್ಥೆ ಸ್ಥಾಪಿಸಿ, ಗ್ರಾಮೀಣ ಮಟ್ಟದ ಸರ್ಕಾರಿ ಶಾಲೆಗಳ ಉಳಿವಿಗೆ ನಿರಂತರ ಕಾರ್ಯಕ್ರಮ ಹಮ್ಮಿಕೊಂಡು ಇದುವರೆಗೂ 18 ಶಾಲೆಗಳಿಗೆ ಕಾಯಕಲ್ಪ ನೀಡಲಾಗಿದೆ ಎಂದು ಸಂಸ್ಥೆಯ ರವಿ ತಿಳಿಸಿದ್ದಾರೆ.

ADVERTISEMENT

ಪದಾಧಿಕಾರಿಗಳಾದ ಶಶಿಕಾಂತ್, ರವಿಕುಮಾರ್, ಸಂಗನೇಶ್, ನವೀನ್ ರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.