ADVERTISEMENT

ಮಧುಗಿರಿ | ಕಾರುಗಳ ನಡುವೆ ಡಿಕ್ಕಿ: ಬಾಲಕ ಸೇರಿ ಐವರು ಸಾವು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2024, 14:44 IST
Last Updated 8 ಸೆಪ್ಟೆಂಬರ್ 2024, 14:44 IST
   

ಮಧುಗಿರಿ: ತಾಲ್ಲೂಕಿನ ಕಾಟಗೊಂಡನಹಳ್ಳಿ ಬಳಿ ಭಾನುವಾರ ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಬಾಲಕ ಸೇರಿ ಐವರು ಸಾವನ್ನಪ್ಪಿದ್ದಾರೆ.

ಪಾವಗಡ ತಾಲ್ಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ (62), ಅವರ ಮಗಳು ಸಿಂಧುಜಾ (34), ಮೊಮ್ಮಗ ವೇದಾಸ್ ರೆಡ್ಡಿ (8), ಮಧುಗಿರಿ ತಾಲ್ಲೂಕು ಮಿಡಿಗೇಶಿ ಹೋಬಳಿಯ ಕಾರೇನಹಳ್ಳಿ ಗ್ರಾಮದ ನಾಗರಾಜು (34), ಸಿದ್ಧಗಂಗಪ್ಪ (35) ಮೃತರು.

ಎತ್ತಿನಹಳ್ಳಿ ಗ್ರಾಮದ ಗೀತಾ (29), ಪುತ್ರ ಯೋದಾಕಿರಣ್ (14), ಚಾಲಕ ಆನಂದ್ (30), ಮೃತ ಸಿಂಧೂಜಾ ಪುತ್ರ ಟ್ರಯಾಗಸ್ ದೇವ್ ರೆಡ್ಡಿ (14 ತಿಂಗಳು) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

ಜನಾರ್ದನ ರೆಡ್ಡಿ ಸೇರಿದಂತೆ ಏಳು ಜನ ಕಾರಿನಲ್ಲಿ ಎತ್ತಿನಹಳ್ಳಿ ಗ್ರಾಮದಿಂದ ಬೆಂಗಳೂರಿಗೆ ತೆರಳುತ್ತಿದ್ದರು. ನಾಗರಾಜು, ಸಿದ್ಧಗಂಗಪ್ಪ ಬೆಂಗಳೂರಿನಿಂದ ಮಧುಗಿರಿ ಮಾರ್ಗವಾಗಿ ಕಾರೇನಹಳ್ಳಿಗೆ ತೆರಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.