ಪಾವಗಡ: ತಾಲ್ಲೂಕಿನ ನಲಿಗಾನಹಳ್ಳಿ ಬಳಿ ಭಾನುವಾರ ವಿಷ್ಣು ಸಮಾಜದಿಂದ ಹೋಳಿ ಹಬ್ಬ ಆಚರಿಸಲಾಯಿತು. ವಿವಿಧೆಡೆಯಿಂದ ಆಗಮಿಸಿದ್ದ ಕಲಾವಿದರು ನೃತ್ಯ, ಕೋಲಾಟ ಪ್ರದರ್ಶಿಸಿದರು.
ಮಹಿಳೆಯರು, ಮಕ್ಕಳು ಸೇರಿದಂತೆ ಸಮುದಾಯದವರು ಒಂದೆಡೆ ಸೇರಿ ಸಂಪ್ರದಾಯ ಆಚರಣೆಯಂತೆ ಹೋಳಿ ಆಚರಿಸಿದರು. ವಿಷ್ಣು ಸಮಾಜದ ಅಧ್ಯಕ್ಷ ಬಸ್ತಿರಾಂ, ಗಂಗಾ ಸಿಂಗ್, ಮೋಹನ್ ಲಾಲ್, ಉಪ್ಮಾ ರಾಮ್, ಜಾಮತ್ ರಾಮ್, ಕರಣ್ ಸಿಂಗ್, ನರಸಿ ಪಾಟೇಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.