ADVERTISEMENT

ಕುಣಿಗಲ್: ರಾಯರ ಬೃಂದಾವನಕ್ಕೆ ಪೂಜೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 13:26 IST
Last Updated 9 ಜುಲೈ 2024, 13:26 IST
ಕುಣಿಗಲ್ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಸೋದೆ ಶ್ರೀ ವಾದಿರಾಜಮಠದ ವಿಶ್ವವಲ್ಲಭ ತೀರ್ಥ ಸ್ವಾಮಿಯವರನ್ನು ಮಠದವತಿಯಿಂದ ಸನ್ಮಾನಿಸಲಾಯಿತು
ಕುಣಿಗಲ್ ಶ್ರೀ ರಾಘವೇಂದ್ರಸ್ವಾಮಿಗಳ ಮಠಕ್ಕೆ ಭೇಟಿ ನೀಡಿದ ಸೋದೆ ಶ್ರೀ ವಾದಿರಾಜಮಠದ ವಿಶ್ವವಲ್ಲಭ ತೀರ್ಥ ಸ್ವಾಮಿಯವರನ್ನು ಮಠದವತಿಯಿಂದ ಸನ್ಮಾನಿಸಲಾಯಿತು   

ಕುಣಿಗಲ್: ನಿಷ್ಕಲ್ಮಷ ಭಕ್ತಿಗೆ ಭಗವಂತ ಒಲಿದು ಸಾರ್ಥಕ ಜೀವನಕ್ಕೆ ಸಾಕ್ಷಿಯಾಗುವನು ಎಂದು ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥಸ್ವಾಮೀಜಿ ತಿಳಿಸಿದರು.

ಪಟ್ಟಣದ ಮದ್ದೂರು ರಸ್ತೆಯ ನಂಜನಗೂಡು ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿ ರಾಯರ ಬೃಂದಾವನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕಲಿಯುಗದ ಕಲ್ಪವೃಕ್ಷವಾಗಿರುವ ರಾಯರು ಸರ್ವಜನಾಂಗದ ಹಿತ ಬಯಸಿ ಭಕ್ತರ ರಕ್ಷಣೆ ಮಾಡಿ ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ. ಭಕ್ತರು ಶ್ರದ್ಧಾ– ಭಕ್ತಿ, ಸಮರ್ಪಣಾ ಭಾವದಿಂದ ಭಕ್ತಿ ಸಮರ್ಪಿಸಿದಾಗ ಮಾತ್ರವೇ ಒಳ್ಳೆಯ ಫಲ ಪಡೆಯಲು ಸಾಧ್ಯ ಎಂದರು.

ADVERTISEMENT

ಮಠದ ವಿಚಾರಣ ಕರ್ತ ಬಿ.ಕೆ.ವೆಂಕಟಕೃಷ್ಣರಾವ್, ವ್ಯವಸ್ಥಾಪಕ ಅನಂತಕುಮಾರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.