ADVERTISEMENT

Accident: ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ವೆಂಕಟೇಶ್‌ ಸಾವು

​ಪ್ರಜಾವಾಣಿ ವಾರ್ತೆ
Published 16 ಮೇ 2024, 10:09 IST
Last Updated 16 ಮೇ 2024, 10:09 IST
<div class="paragraphs"><p>ಎಎಸ್ಐ ಬಿ.ವೆಂಕಟೇಶ್‌ (ಒಳಚಿತ್ರ)</p></div>

ಎಎಸ್ಐ ಬಿ.ವೆಂಕಟೇಶ್‌ (ಒಳಚಿತ್ರ)

   

ಕುಣಿಗಲ್: ತಾಲ್ಲೂಕಿನ ಅಲಪ್ಪನ‌ಗುಡ್ಡೆ ಸಮೀಪ ಬುಧವಾರ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಕುಣಿಗಲ್‌ ಪೊಲೀಸ್‌ ಠಾಣೆಯ ಎಎಸ್ಐ ಬಿ.ವೆಂಕಟೇಶ್‌ (52) ಚುಂಚನಗಿರಿ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಕಾರ್ಯ ನಿಮಿತ್ತ ತಮ್ಮ ಬೈಕ್‌ನಲ್ಲಿ ಎಡೆಯೂರಿಗೆ ಹೋಗಿ ಹಿಂತಿರುಗುವಾಗ ಅಪಘಾತ ಸಂಭವಿಸಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ADVERTISEMENT

ವೆಂಕಟೇಶ್‌ ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಸಮೀಪದ ಯಮರಹಳ್ಳಿ ಗ್ರಾಮದವರು. ಹೆಬ್ಬೂರು, ಅಮೃತೂರು, ಹುಲಿಯೂರುದುರ್ಗ, ಕುಣಿಗಲ್‌ ಠಾಣೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.