ADVERTISEMENT

ಕೊಡಿಗೇನಹಳ್ಳಿ | ಚಿರತೆ ದಾಳಿ: 32 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2024, 5:27 IST
Last Updated 17 ಸೆಪ್ಟೆಂಬರ್ 2024, 5:27 IST
   

ಕೊಡಿಗೇನಹಳ್ಳಿ: ಪುರವರ ಹೋಬಳಿ ದೊಡ್ಡಹೊಸಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಚಿರತೆ ದಾಳಿ ನಡೆಸಿ 32 ಕುರಿಗಳನ್ನು ಕೊಂದು ಹಾಕಿದೆ.

ಕುರಿಗಾಹಿ ಮಲ್ಲಣ್ಣ ಎಂಬುವವರ ಕುರಿರೊಪ್ಪಕ್ಕೆ ಅಳವಡಿಸಿದ್ದ ಮೆಸ್ ಕಿತ್ತುಹಾಕಿ ಒಳ ನುಗ್ಗಿರುವ ಚಿರತೆಯು ಕುರಿಗಳ ಮೇಲೆ ದಾಳಿ ನಡೆಸಿದೆ. ಕುರಿಗಳನ್ನೇ ನಂಬಿ ಜೀವನ ನಡೆಸುತ್ತಿದ್ದ ಮಲ್ಲಣ್ಣಗೆ ದಿಕ್ಕು ತೋಚದಂತಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.