ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿ ಜಡೆಯ ಗ್ರಾಮದ ಹೊರವಲಯದ ಯೋಗೇಶ್ ಎಂಬುವರ ಮನೆ ಬಳಿ ಆಹಾರ ಅರಿಸಿ ಬಂದ ಚಿರತೆಯನ್ನು ಸಾಕು ನಾಯಿ ಓಡಿಸಿಕೊಂಡು ಹೋಗಿದೆ.
ಬುಧವಾರ ತಡರಾತ್ರಿ ಮನೆ ಮಾಲೀಕ ಯೋಗೇಶ್ ಅವರ ಮನೆಯ ಸಾಕು ನಾಯಿ ರಾಟ್ ವಿಲರ್ ಬೊಗಳುತ್ತಾ ಚಿರತೆಯನ್ನು ಓಡಿಸಿಕೊಂಡು ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.