ಮಧುಗಿರಿ: ಪುರಸಭೆಯ 13ನೇ ವಾರ್ಡ್ ಸದಸ್ಯರಾಗಿ ಕಾಂಗ್ರೆಸ್ನ ಎಂ.ಶ್ರೀಧರ್ ಶನಿವಾರ ಆಯ್ಕೆಯಾದರು.
ಸದಸ್ಯ ನರಸಿಂಹಮೂರ್ತಿ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ 27ರಂದು ಚುನಾವಣೆ ನಡೆದಿತ್ತು.
ಶ್ರೀಧರ್ 386 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಎಂ.ಆರ್. ಸುರೇಶ್ ಚಂದ್ರ 217 ಮತ ಪಡೆದರು. ಮೂರು ಮತ ನೋಟಕ್ಕೆ ಚುನಾವಣೆಯಾಗಿವೆ.
ಶ್ರೀಧರ್ ಮಾತನಾಡಿ, ವಾರ್ಡ್ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಸದಸ್ಯರಾದ ಮಂಜುನಾಥ ಆಚಾರ್, ಮಂಜುನಾಥ, ಅಲೀಂ, ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.