ಕೊಡಿಗೇನಹಳ್ಳಿ: ಕೌಟುಂಬಿಕ ಕಲಹದ ವಿಚಾರವಾಗಿ ಗಂಡ- ಹೆಂಡತಿ ಜಗಳವಾಡುವಾಗ ಜಗಳ ಬಿಡಿಸಲು ಅಡ್ಡಬಂದ ಅತ್ತೆ ಹಶ್ಮತ್ ಉನ್ನಿಸ್ (54) ಅವರನ್ನು ಅಳಿಯ ಸೈಯದ್ ಸುಹೇಲ್ ಕೋಲಿನಿಂದ ಹೊಡೆದು ಶನಿವಾರ ಹತ್ಯೆ ಮಾಡಿದ್ದಾರೆ.
ಸೈಯದ್ ಸುಹೇಲ್ ಕೋಲಿನಿಂದ ತಲೆಗೆ ಹೊಡೆದ ಪರಿಣಾಮ ಹಶ್ಮತ್ ಉನ್ನಿಸ್ ತೀವ್ರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.