ಕುಣಿಗಲ್: ಕಾರು ಹರಿದು ಅಂಗವಿಕಲ ಮಹಿಳೆ ಮೃತಪಟ್ಟ ಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಕದರಪುರದ ಕೆಂಪಮ್ಮ (73) ಎಂದು ಗುರುತಿಸಲಾಗಿದೆ. ಕೆಂಪಮ್ಮ ಕದರಪುರದವರಾಗಿದ್ದರೂ ಪತಿಯ ಮರಣ ನಂತರ ಪಟ್ಟಣ ಸೇರಿದ್ದು, ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಇರುತ್ತಿದ್ದರು. ನಡೆಯಲಾಗದ ಕಾರಣ ತೆವಳುತ್ತ ಭಿಕ್ಷೆ ಬೇಡುತ್ತಿದ್ದರು.
ಸೋಮವಾರ ಮಧ್ಯಾಹ್ನ ಆಸ್ಪತ್ರೆ ಮುಂಭಾಗದ ಹೋಟೆಲ್ಗೆ ತೆವಳುತ್ತ ಸಾಗಿ ಬರುತ್ತಿರುವಾಗ ಅಪರಿಚಿತ ಕಾರು ಹರಿದು ಎಳೆದೊಯ್ದ ಪರಿಣಾಮ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.