ADVERTISEMENT

ಕುಣಿಗಲ್ | ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2024, 15:36 IST
Last Updated 31 ಮಾರ್ಚ್ 2024, 15:36 IST

ಕುಣಿಗಲ್: ತಾಲ್ಲೂಕಿನ ಅವರೆಗೆರೆ ಗ್ರಾಮದ ಬಳಿ ಭಾನುವಾರ ಬೈಕ್‌ಗೆ ನಾಯಿ ಅಡ್ಡ ಬಂದ ಪರಿಣಾಮ ಆಯತಪ್ಪಿ ಬಿದ್ದು ಹಿಂಬದಿ ಸವಾರ ಮರಿಸೋಮ್ಮನ ಹಳ್ಳಿಯ ಚೇತನ್ (24) ಮೃತಪಟ್ಟಿದ್ದಾರೆ.

ಚೇತನ್‌ ಸ್ನೇಹಿತ ಶಿವರಾಜ್ ಜತೆ ತಾಲ್ಲೂಕಿನ ಹುಲಿವಾನ ಗ್ರಾಮದ ದೇವತಾ ಕಾರ್ಯಕ್ಕೆ ಹೋಗುವಾಗ ಅಪಘಾತ ನಡೆದಿದೆ. ಬೈಕ್‌ ಚಾಲಕ ಸಹ ಗಾಯಗೊಂಡಿದ್ದಾರೆ.

ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.