ಕೊಡಿಗೇನಹಳ್ಳಿ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಮಳೆ ಸುರಿದಿದೆ. ಕೊರಟಗೆರೆ ಭಾಗದಲ್ಲಿ ಮಳೆಯಾದ್ದರಿಂದ ಜಯಮಂಗಲಿ ನದಿ ಸಣ್ಣದಾಗಿ ಹರಿದಿದೆ.
ದೊಡ್ಡಮಾಲೂರು ಹಾಗೂ ಮೈದನಹಳ್ಳಿ ಕೆರೆಗಳಿಗೆ ನೀರು ಸರಾಗವಾಗಿ ಹರಿದರೆ, ಎತ್ತರದಲ್ಲಿರುವ ಕೊಡಿಗೇನಹಳ್ಳಿ ಕೆರೆ ಕಾಲುವೆಗೆ ನೀರು ಹರಿಸಲೆಂದು ಕೊಡಿಗೇನಹಳ್ಳಿ ಗ್ರಾಮದ ನ್ಯಾತಪ್ಪ, ರಾಜಗೋಪಾಲರೆಡ್ಡಿ ವೀರಾಪುರದ ಸೇತುವೆ ಬಳಿ ಜೆಸಿಬಿ ಮೂಲಕ ಕೆಲಸ ಮಾಡಿಸಿದ ನಂತರ ಕಾಲುವೆಗೆ ನೀರು ಹರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.