ADVERTISEMENT

ಶ್ರೀರಾಮ ಮಂತ್ರಾಕ್ಷತೆ ಕಳಶಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 14:17 IST
Last Updated 11 ಡಿಸೆಂಬರ್ 2023, 14:17 IST
ಚಿಕ್ಕನಾಯಕನಹಳ್ಳಿಗೆ ಆಗಮಿಸಿದ ಆಯೋಧ್ಯೆ ಶ್ರೀರಾಮ ಅರ್ಪಿತ ಮಂತ್ರಾಕ್ಷತೆ ಕಳಶಕ್ಕೆ ಸ್ವಾಗತ ನೀಡಲಾಯಿತು
ಚಿಕ್ಕನಾಯಕನಹಳ್ಳಿಗೆ ಆಗಮಿಸಿದ ಆಯೋಧ್ಯೆ ಶ್ರೀರಾಮ ಅರ್ಪಿತ ಮಂತ್ರಾಕ್ಷತೆ ಕಳಶಕ್ಕೆ ಸ್ವಾಗತ ನೀಡಲಾಯಿತು   

ಚಿಕ್ಕನಾಯಕನಹಳ್ಳಿ: ಪಟ್ಟಣಕ್ಕೆ ಸೋಮವಾರ ಆಗಮಿಸಿದ ಆಯೋಧ್ಯೆಗೆ ಅರ್ಪಿತ ಮಂತ್ರಾಕ್ಷತೆ ಕಳಶಕ್ಕೆ ವಿಜೃಂಭಣೆಯ ಸ್ವಾಗತ ನೀಡಲಾಯಿತು.

ಪಟ್ಟಣದ ಪಂಚಮುಖಿ ಆಂಜನೇಯ ದೇವಾಲಯ ಬಳಿಗೆ ಬೆಳಿಗ್ಗೆ 11ಕ್ಕೆ ಆಗಮಿಸಿದ ಮಂತ್ರಾಕ್ಷತೆ ಕಳಶವನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ನಂತರ ಎತ್ತಿನಗಾಡಿಯಲ್ಲಿ ಮಂತ್ರಾಕ್ಷತೆ ಕಳಶವಿರಿಸಿ ಪೂಜೆ ಸಲ್ಲಿಸಲಾಯಿತು.

ಮಂಗಳವಾದ್ಯ, ಸೋಮನ ಕುಣಿತ, ಗಂಗೆಯ ಕಳಶಹೊತ್ತ ಕುವರಿಯರ ತಂಡ, ಶ್ರೀರಾಮ ಹಾಗೂ ಹನುಮ ವೇಶಧಾರಿಗಳ ತಂಡದೊಂದಿಗೆ ಶೋಭಾಯಾತ್ರೆ ನೆಹರೂ ವೃತ್ತದಿಂದ ಖಾಸಗಿ ಬಸ್‍ನಿಲ್ದಾಣ, ಅರಳೆಪೇಟೆ ಮೂಲಕ ಹಳೆಯೂರು ಆಂಜನೇಯ ದೇವಾಲಯದವರೆಗೆ ಸಾಗಿತು. ದೇವಸ್ಥಾನದಲ್ಲಿ ಭಕ್ತರ ದರ್ಶನಕ್ಕಾಗಿ ಕಳಶವನ್ನಿರಿಸಲಾಯಿತು.

ADVERTISEMENT

ರಾಕೇಶ್‍ಅಣೆಕಟ್ಟೆ, ಹರ್ಷ, ಸುಧೀಂದ್ರ, ಎಂ. ಬನಶಂಕರಯ್ಯ, ಲಕ್ಷ್ಮಿಕಾಂತ್, ವೇದಮೂರ್ತಿ, ಶ್ರೀನಿವಾಸಮೂರ್ತಿ, ಮಿಲಿಟರಿ ಶಿವಣ್ಣ, ಮೇರುನಾಥ್, ಹುಳಿಯಾರಿನ ಬಸವಯ್ಯ, ಶ್ರೀಧರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.